ನಾಮಪತ್ರ ಸಲ್ಲಿಸಿದ ನಾಗರಾಜ್

ನಾಮಪತ್ರ ಸಲ್ಲಿಸಿದ ನಾಗರಾಜ್

ದಾವಣಗೆರೆ,ಏ.19- ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ  ನಾಗರಾಜ್ ಲೋಕಿಕೆರೆ ಅವರು ಎರಡನೇ ಹಂತದಲ್ಲಿ ತಮ್ಮ ಉಮೇದುವಾರಿಕೆ ಅರ್ಜಿಯನ್ನು ಇಂದು ಸಲ್ಲಿಸಿ ದರು. ಚುನಾವಣಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರಿಗೆ ನಾಮಪತ್ರ ಸಲ್ಲಿಸುವ  ಸಂದರ್ಭದಲ್ಲಿ  ನಾಗರಾಜ್ ಅವರ ತಂದೆ ಕೆ. ಹನುಮಂತಪ್ಪ, ಧರ್ಮಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ,  ಪಕ್ಷದ  ಮುಖಂಡರಾದ ಕೆ.ಎನ್. ಓಂಕಾರಪ್ಪ, ಬಿ. ದಿಳ್ಯಪ್ಪ  ಹಾಜರಿದ್ದರು.

error: Content is protected !!