ಬಸವ ಬಳಗ, ನೀಲಾಂಬಿಕಾ ಅನುಭಾವ ಕೇಂದ್ರ ಹಾಗೂ ಅಜ್ಜಂಪುರ ಶೆಟ್ರ ಸೇವಾ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಇದೇ ದಿನಾಂಕ 23ರ ವರೆಗೆ ಬಸವ ಜಯಂತಿ ಕಾರ್ಯಕ್ರಮಗಳನ್ನು ಸರಸ್ವತಿ ನಗರದ ಬಸವ ಬಳಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ ಪ್ರಭಾತ್ ಫೇರಿಯ ನಂತರ 5 ರಿಂದ 15 ವರ್ಷದ ಮಕ್ಕಳಿಗೆ ಬೆಳಿಗ್ಗೆ 10 ಗಂಟೆಯಿಂದ ವಚನ ಕಂಠಪಾಠ ಸ್ಪರ್ಧೆ, ದಿನಾಂಕ 21 ರಂದು ಬೆಳಿಗ್ಗೆ 10 ಗಂಟೆಯಿಂದ ಪ್ರಬಂಧ ಸ್ಪರ್ಧೆ, ದಿನಾಂಕ 22 ರಂದು ಬೆಳಿಗ್ಗೆ 10 ಗಂಟೆಗೆ ಶರಣ-ಶರಣೆಯರ ವೇಷ ಭೂಷಣ ಸ್ಪರ್ಧೆ, ದಿನಾಂಕ 23 ರ ಬೆಳಿಗ್ಗೆ 7 ಗಂಟೆಗೆ ಷಟ್ಸ್ಥಲ ಧ್ವಜಾರೋಹಣ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಫೋನ್ ಸಂಖ್ಯೆ : 99720 84938, 73377 37884.