ಬಿಡಾಡಿ ದನ-ನಾಯಿ-ಹಂದಿ ನಿಯಂತ್ರಿಸಿ

ಮಾನ್ಯರೇ,

ದಾವಣಗೆರೆ ನಗರ ಸ್ಮಾರ್ಟ್‌ಸಿಟಿ ಆದ ಮೇಲೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಜೊತೆ ಜೊತೆಗೆ ಹೆಚ್ಚು ಹೆಚ್ಚು ಸಮಸ್ಯೆಗಳು ನಗರದ ಜನತೆಯನ್ನು ಕಾಡುತ್ತಿವೆ.

ಪ್ರಮುಖ ಸಮಸ್ಯೆಯೆಂದರೆ ಎಲ್ಲಾ ರಸ್ತೆಗಳಲ್ಲಿ ವಾಹನ ಸವಾರರಿಗೆ ಕಿರಿ ಕಿರಿಯಾಗುವಂತೆ ನಾಯಿ, ಹಂದಿ, ದನಗಳ ಕಾಟ ಜಾಸ್ತಿಯಾಗಿದೆ. ಅಡ್ಡಾದಿಡ್ಡಿ ಬರುವ ಈ ಪ್ರಾಣಿಗಳಿಂದ ಅನೇಕ ಅಪಘಾತಗಳು ಸಂಭವಿಸುತ್ತಲೇ ಇವೆ. ಜಿಲ್ಲಾಡಳಿತ ಮತ್ತು ಪಾಲಿಕೆ ಈ ಕುರಿತು ಆಲೋಚಿಸಬೇಕಿದೆ. ಪ್ರತ್ಯೇಕ ದೊಡ್ಡಿಗಳನ್ನು ನಿರ್ಮಿಸಿ ಈ ಪ್ರಾಣಿಗಳನ್ನು ಹಿಡಿದು ಒಂದೆಡೆ ಕಲೆ ಹಾಕಿ ನಿಯಂತ್ರಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿ ವರ್ಗ ಕ್ರಮ ಕೈಗೊಳ್ಳುವಂತೆ ನಮ್ಮ ಮನವಿ.

– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.

error: Content is protected !!