ಮಾಸ್ಕ್ ದಂಡ ಆದಾಯಕ್ಕಲ್ಲ

ಮಾನ್ಯರೇ,

ಕೆ.ಎಲ್. ಹರೀಶ್, ಬಸಾ ಪುರ ಅವರು ಮಾಸ್ಕ್ ದಂಡದ ವಿಷಯವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಒಬ್ಬ ವೈದ್ಯನಾಗಿ, ಕೊರೊನಾ ರೋಗಿಗಳ ಸಾವು, ನೋವುಗಳನ್ನು ಹತ್ತಿರದಿಂದ ನೋಡುತ್ತಿದ್ದೇನೆ. ನೀವು ದಂಡ ಕಟ್ಟುವುದು ಬೇಡ ಸ್ವಾಮಿ. ಸರಿಯಾಗಿ ಮಾಸ್ಕ್ ಧರಿಸಿ, ಬೇರೆಯವರಿಗೂ ತಿಳಿ ಹೇಳುವುದು ನಿಮ್ಮ ಕರ್ತವ್ಯ. ಇದರಿಂದ ಕೊರೊನಾ ತಡೆಯಬಹುದೆಂದು ಸಾಬೀತಾಗಿದೆ. ಸರ್ಕಾರ ಆದಾಯಕ್ಕಲ್ಲ ಇದನ್ನ ಮಾಡಿರೋದು.

– ವೀರೇಂದ್ರಕುಮಾರ್

error: Content is protected !!