ನೆರಳು ಕೊಡುವಂತಹ ಮರ ನರಳಾಡುವಂತೆ ಮಾಡೀತು ಎಚ್ಚರ

ಮಾನ್ಯರೇ, 

ನಗರದಲ್ಲಿ 50 ವರ್ಷಗಳ ಹಿಂದೆ ಶಾಸಕ ಪಂಪಾಪತಿ ಅವರು ನೆಟ್ಟಗಿಡಗಳು ಹೆಮ್ಮರಗಳಾಗಿವೆ. ಅವುಗಳ ಪೋಷಣೆಗಳನ್ನು ಯಾರೂ ಮಾಡಿಲ್ಲ. ಆದರೆ ಎಲ್ಲರಿಗೂ ನೆರಳನ್ನು ಕೊಟ್ಟಿವೆ. ವಯಸ್ಸಾಯಿತು. ಎಲೆಗಳು ಹಣ್ಣು ಹಣ್ಣಾಗಿ, ಮರಕೊಂಬೆಗಳು ಮುರಿದು ಬೀಳುವಂತಾ ಗಿವೆ. ಎಷ್ಟೋ ಸಾರಿ ಸವಾರರ ಮೇಲೆ ಕಾರು, ಬೈಕಿನ ಮೇಲೆ ಬಿದ್ದು ಅನೇಕ ಅಪಘಾತಗಳು ಸಂಭವಿಸಿವೆ. ಇದಕ್ಕೆಲ್ಲಾ ಯಾರು ಹೊಣೆ?

ಗುಂಡಿ ಸರ್ಕಲ್, ಕಾನ್ವೆಂಟ್ ರಸ್ತೆ, ಲಾಯರ್ ರಸ್ತೆ ಮತ್ತು ಮಾರ್ಕೆಟ್ ನಲ್ಲಿ ಒಣಗಿ, ಲಡ್ಡಾಗಿ ಆಗಲೋ, ಈಗಲೋ ಯಾವ ಕ್ಷಣದಲ್ಲಿ ಯಾರ ಜೀವ ತೆಗೆಯುತ್ತದೆಯೋ ಊಹಿಸಲಾಗದು. ಪರಿಸರವಾದಿಗಳು, ಪಾಲಿಕೆಯವರು ಎದ್ದೇಳಿ. ಜೀವಗಳನ್ನು ಉಳಿಸಿ, ಪುಣ್ಯಕಟ್ಟಿಕೊಳ್ಳೋಣ.

-ಬಿ. ಚಂದ್ರಶೇಖರ್, ನಿವೃತ್ತ ಇಂಜಿನಿಯರ್‌, ಅಧ್ಯಕ್ಷರು, ಸಿದ್ಧವೀರಪ್ಪ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ, ದಾವಣಗೆರೆ.

error: Content is protected !!