ಬಂಜಾರ ಸಮುದಾಯ ಅಭಿವೃದ್ಧಿಗೆ ಸಿಎಂರಿಂದ ಹಲವಾರು ಯೋಜನೆೆ

ರಾಣೇಬೆನ್ನೂರು, ಆ.30- ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ತಾಲ್ಲೂಕಿನ ಚಿಕ್ಕಅರಳಹಳ್ಳಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ 5 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಸಿಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 

ನಗರದಂತೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ರಸ್ತೆ, ಚರಂಡಿಗಳ ನಿರ್ಮಾಣ ತುಂಬಾ ಅಗತ್ಯ ವಿದೆ. ಸಾರ್ವಜನಿಕರು ಗುತ್ತಿಗೆ ದಾರರಿಗೆ ಸಹಕರಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.  ಮೆಡ್ಲೇರಿ, ನೂಕಾಪುರ, ಚನ್ನಾಪುರ, ಹುಲ್ಲತ್ತಿ, ಗುಡಗೂರ ತಾಂಡಾಗಳು ಹಾಗೂ ಗೋವಿಂದ ಬಡಾವಣೆ ಸೇರಿದಂತೆ ಒಟ್ಟು 50 ಲಕ್ಷದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. 

ಮಾಲತೇಶ ಜಾಧವ್, ರಮೇಶ ನಾಯ್ಕ್, ಪುಟ್ಟಪ್ಪ ಲಮಾಣಿ, ಈರಪ್ಪ ಬಜ್ಜಿ, ಮಂಜಣ್ಣ ವಡ್ಡರ, ಗುತ್ತಿಗೆದಾರ ಸಂತೋಷ ಮುಡದೇವಣ್ಣನವರ, ಸಹಾಯಕ ಇಂಜಿನಿಯರ್ ವಿಕಾಸ್ ಮತ್ತಿತರರಿದ್ದರು.

error: Content is protected !!