ಬದುಕಿಗೆ ಸಂಸ್ಕಾರ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ

ಬದುಕಿಗೆ ಸಂಸ್ಕಾರ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ

ದೊಣೆಹಳ್ಳಿ : ಶರಣ ಸಾಹಿತ್ ಪರಿಷತ್ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಬಿ.ಆರ್. ಚಂದ್ರಪ್ಪ

ಜಗಳೂರು, ಆ.12- ಬದುಕಿಗೆ ಸಂಸ್ಕಾರ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರು ಹಾಗೂ ದೊಣೆಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ಚಂದ್ರಪ್ಪ ತಿಳಿಸಿದರು.

 ದೊಣೆಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ `ಶರಣರ ಜೀವನ ಮೌಲ್ಯಗಳು’ ಎನ್ನುವ ದತ್ತಿ ಉಪನ್ಯಾಸ ಕಾರ್ಯ ಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾಂತ್ರಿಕ ಬದುಕಿನಲ್ಲಿ ಮೌಲ್ಯಗಳು ನಶಿಸುತ್ತಿವೆ. ಇಂತಹ ಪರ್ವಕಾಲದಲ್ಲಿ ಶರಣರ ಜೀವನ ಮೌಲ್ಯಗಳು ಜೀವ ಸಂಜೀವಿನಿ ಇದ್ದಂತೆ ಎಂದು ಅವರು ತಿಳಿಸಿದರು.

ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರ ಪ್ರಭಾಕರ ಲಕ್ಕೋಳ ಉಪನ್ಯಾಸ ನೀಡಿ, ಬದುಕಿನ ಅನುಭವಗಳ ಸಾರವೇ ವಚನಗಳು, ವಚನ ಎಂದರೆ ಮಾತು, ಪ್ರಮಾಣ. ಮಗು ತೊದಲು ನುಡಿಗಳನ್ನು  ಆಡಿದಾಗ ತಾಯಿ, ಕುಟುಂಬ, ಸಮಾಜಕ್ಕೆ ಹಿತವೆನಿಸುತ್ತದೆ. ಅಂತೆಯೇ ವಚನಗಳು ಮನೆ, ಮಠ, ಸಮಾಜಕ್ಕೆ ಹಿತವಾದವುಗಳು. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ನಮ್ಮ ನಡೆ, ನುಡಿಗಳನ್ನು ಕಲಿಸಿಕೊಟ್ಟವರು ಶರಣರು ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು.

ನಿವೃತ್ತ ಉಪನ್ಯಾಸಕ ಡಿ.ಸಿ. ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿದರು. 

ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್.ಟಿ. ಎರ್ರಿ ಸ್ವಾಮಿ, ಪತ್ರಕರ್ತ ಅಣಬೂರು ಮಠದ ಕೊಟ್ರೇಶ್, ಕದಳಿ ಮಹಿಳಾ ವೇದಿಕೆಯ  ಅಧ್ಯಕ್ಷರಾದ ಶ್ರೀಮತಿ ಜೆ. ಆರ್. ಗೌರಮ್ಮ.  ಈ . ಸತೀಶ್, ವೈ ಎಂ. ಲೀಲಾವತಿ ಶಾಲೆಯ ಅಧ್ಯಾಪಕರಾದ ಶ್ರೀಮತಿ ಕವಿತಾ, ಶಶಿರೇಖಾ, ತಿಪ್ಪೇಶ್, ಬಸವರಾಜ್, ಮನೋಜ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!