ಗ್ರಾ.ಪಂ ಉಪಾಧ್ಯಕ್ಷೆಯಾಗಿ ಮಂಜುಳಾ

ಗ್ರಾ.ಪಂ ಉಪಾಧ್ಯಕ್ಷೆಯಾಗಿ ಮಂಜುಳಾ

ಹೊನ್ನಾಳಿ, ಫೆ.8 – ತಾಲ್ಲೂಕಿನ ಕುಂದೂರು ಗ್ರಾ.ಪಂ ಉಪಾಧ್ಯಕ್ಷೆಯಾಗಿ ವಿ.ಮಂಜುಳಾ ಎಂ.ಪಿ. ಮಲ್ಲಿಕಾರ್ಜುನಸ್ವಾಮಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್.ರುದ್ರಪ್ಪ ಅವರು ಮಂಜುಳಾ ಅವರ ಆಯ್ಕೆಯನ್ನು ಘೋಷಿಸಿದರು.

ಕುಂದೂರು ಗ್ರಾ.ಪಂ ಅಧ್ಯಕ್ಷ ರಹಮತ್ ಉಲ್ಲಾ ಖಾನ್, ಸದಸ್ಯರಾದ ಸಿ. ಆಂಜನೇಯ, ಚಿದಾನಂದಮೂರ್ತಿ, ರೇಖಾ ಎನ್.ಜಿ.ರೇವಣಸಿದ್ಧಪ್ಪ, ರತ್ನಮ್ಮ, ಜಿ.ಎಂ.ಉದಯಕುಮಾರ್, ಬಿ.ಎಂ.ಲತಾ ಹಾಲೇಶ್ ಮುಡೋಳ್, ಎಸ್.ಆರ್.ಪ್ರಸನ್ನಕುಮಾರ್, ಸುರೇಶ್, ಎಸ್.ಧನಂಜಯ, ನುಸ್ರರತ್ ಜಬೀನಾ, ಪಿಡಿಒ ವಿಜಯ್‍ಗೌಡರ್, ಕಾರ್ಯದರ್ಶಿ ಬಿ.ಜಿ. ವೀರೇಂದ್ರ, ಬಿಲ್ ಕಲೆಕ್ಟರ್ ಎ.ಅಮೃತ, ಕುಂಕುವ ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜಪ್ಪ, ಮುಖಂಡರಾದ ಎಂ.ಪಿ.ಮಲ್ಲಿಕಾರ್ಜುನಸ್ವಾಮಿ, ಮಾಲತೇಶ್, ಕೆ.ಬಿ.ರೇವಣಸಿದ್ಧಪ್ಪ, ಕೆ.ಎಸ್.ಪರಮೇಶ್ವರಪ್ಪ, ಎನ್.ಜಿ.ರೇವಣಸಿದ್ಧಪ್ಪ, ಎಸ್.ಎಂ.ನಾಗರಾಜ್, ಬಿ.ಮಾದಪ್ಪ, ಅಬು ಸಾಲೇಹ, ಆನಂದಯ್ಯ, ಕೆ.ಉಮಾಪತಿ ಇತರರು ಇದ್ದರು.

error: Content is protected !!