ಕೌಶಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ಪಡೆದುಕೊಳ್ಳಬೇಕು

ಕೌಶಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ಪಡೆದುಕೊಳ್ಳಬೇಕು

ಹರಿಹರದ ಎಸ್‌ಜೆವಿಪಿ ಕಾಲೇಜಿನಲ್ಲಿನ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ  ಪರೀಕ್ಷಾಂಗ ಕುಲಸಚಿವ ಡಾ.ಶಿವಶಂಕರ್  

ಹರಿಹರ, ಏ.1-  ಇಲ್ಲಿನ ಎಸ್.ಜೆ.ವಿ.ಪಿ.  ಪದವಿ ಮಹಾವಿದ್ಯಾಲಯ ಹಾಗು ಸ್ನಾತಕೋತ್ತರ ಕೇಂದ್ರದ ವತಿಯಿಂದ ರಾಜ್ಯಮಟ್ಟದ ಮೃದು ಕೌಶಲ್ಯಾಭಿವೃದ್ದಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ   ಡಾ.ಶಿವಶಂಕರ್  ಕಾರ್ಯಾಗಾರ ಉದ್ಘಾಟಿಸಿ, ವಿದ್ಯಾರ್ಥಿಗಳು ತಮ್ಮ ಪಾಠ ಪ್ರವಚನಗಳೊಂದಿಗೆ ಕೌಶಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಪಡೆದುಕೊಳ್ಳಬೇಕು ಎಂದರು.   ಗ್ರಾಮೀಣ ವಿದ್ಯಾರ್ಥಿಗಳ ಕೌಶಲ್ಯವನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ತಿಳಿಸಿ,  ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳು ಎದುರಿಸಬಹುದಾದ ಸವಾಲುಗಳು ಮತ್ತು ಅವಕಾಶಗಳನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳ ಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು, 

ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ದುಗ್ಗತ್ತಿ ಮಠ್ ಅವರು ಮಾತನಾಡಿ, ಸಂಸ್ಥೆ  ಮತ್ತು ಕಾಲೇಜಿನ ಬೆಳವಣಿಗೆಗೆ ಹಲವಾರು ಕ್ರಿಯಾತ್ಮಕ ಯೋಜನೆಗಳನ್ನು ಹಾಕಿಕೊಂಡಿದ್ದು, ವಿಶ್ವವಿದ್ಯಾಲಯದ ವತಿಯಿಂದ ಅಗತ್ಯ ಸಹಕಾರವನ್ನು ಕೋರಿದರು.

ಜಿಎಂಐಟಿ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ  ಡಾ.ಪ್ರಶಾಂತ್  ಮತ್ತು ತುಮಕೂರಿನ ಎಸ್ಐಟಿ   ಕಾಲೇಜಿನ ಡಾ.ವೈ.ಎಂ.  ಗಿರೀಶ್ ಅವರುಗಳು ವಿಶೇಷ ಕೌಶಲ್ಯಗಳ ಕುರಿತಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.   

ಸಂಸ್ಥೆಯ ಉಪಾಧ್ಯಕ್ಷ  ಡಿ.ಎಂ.ಹಾಲಸ್ವಾಮಿ, ನಿರ್ದೇಶಕರಾದ ಎನ್.ಎಂ.ತಿಪ್ಪೇಸ್ವಾಮಿ, ಎನ್.ಎಚ್.ಪಾಟೀಲ್, ಕೃಷ್ಣ ಡಿ.ನಾಯ್ಕ, ಡಿ.ಜಿ.ಶಿವಾನಂದಪ್ಪ , ಮುಖ್ಯ ಶೈಕ್ಷಣಿಕ ಅಧಿಕಾರಿ  ಡಾ.ಎಸ್.ಹೆಚ್. ಪ್ಯಾಟಿ ಉಪಸ್ಥಿತ ರಿದ್ದರು.  ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು.  

ಐಕ್ಯೂಎಸಿ  ಸಂಯೋಜಕ  ಡಾ.ವೀರಣ್ಣ ಶೆಟ್ಟರ್ ಸ್ವಾಗತಿಸಿದರು. ಡಾ.ರಮೇಶ್ ಪರ್ವತಿ  ವಂದಿಸಿದರು.  ಉಪಾನ್ಯಾಸಕಿ ನಳಿನ  ನಿರೂಪಿಸಿದರು. 

error: Content is protected !!