ಮಲೇಬೆನ್ನೂರು, ಮಾ.31 – ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಮಹಾ ರಥೋತ್ಸವವು ಶುಕ್ರವಾರ ಬೆಳಗಿನ ಜಾವ ವೈಭವದಿಂದ ನಡೆಯಿತು.
ಕಾಗಿನೆಲೆ ಶ್ರೀಗಳು ಮತ್ತು ಈ ದಿನ ಶಾಸಕ ಎಸ್.ರಾಮಪ್ಪ ಅವರು ಹನುಮಪ್ಪನ ದರ್ಶನ ಪಡೆದರು.
ನಾಳೆ ಶನಿವಾರ ಬೆಳಗ್ಗೆ ಶ್ರೀ ಆಂಜನೇಯ ಸ್ವಾಮಿಯು ಎಲ್ಲಾ ದೇವರುಗಳೊಂದಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ ಇರುತ್ತದೆ. ಸಂಜೆ ಭೂತ ಸೇವೆ ನಡೆಯಲಿದೆ.