ಸಂಭ್ರಮದ ರಥೋತ್ಸವ, ಮುಳ್ಳೋತ್ಸವ

ಸಂಭ್ರಮದ ರಥೋತ್ಸವ, ಮುಳ್ಳೋತ್ಸವ

ಮಲೇಬೆನ್ನೂರು, ಮಾ.31- ಹರಳಹಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ಶುಕ್ರವಾರ ಬೆಳಗಿನ ಜಾವ ಸಂಭ್ರಮದಿಂದ ಜರುಗಿತು.

ದೇವಸ್ಥಾನದ ಸಮುದಾಯ ಭವನ ದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಶ್ರೀ ಸ್ವಾಮಿಯ ಮುಳ್ಳೋತ್ಸ ವದಲ್ಲೂ ಅಪಾರ ಭಕ್ತರು ಪಾಲ್ಗೊಂಡಿದ್ದರು. ಹರಕೆ ಹೊತ್ತ ಭಕ್ತರು ಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು. ಈ ವೇಳೆ ದೇವರ ಉತ್ಸವ ಮೂರ್ತಿಗೆ ಹಾಕಲಾಗಿದ್ದ ನೋಟಿನ ಮಾಲೆಗಳು ಗಮನ ಸೆಳೆದವು. 

ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಹೆಚ್.ಎಸ್.ಶಿವಶಂಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಕಾಂಗ್ರೆಸ್ ಮುಖಂಡ ಸುರೇಶ್ ಹಾದಿಮನಿ, ಕುಂಬಳೂರು ವಾಸು, ಭೋವಿಕುಮಾರ್ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.

ನಾಳೆ ಶನಿವಾರ ಬೆಳಿಗ್ಗೆ 9 ರಿಂದ ದೇವರುಗಳು ಮಠದ ಮನೆಗೆ ಹೋಗಿ ಬರುವಾಗ ಭೂತನ ಸೇವೆ ನಂತರ ಬುಟ್ಟಿನ ಸೇವೆ ಹಾಗೂ ಕಂಕಣ ವಿಸರ್ಜನೆ ನಡೆಯಲಿವೆ.

error: Content is protected !!