ಹರಿಹರ : ಕಾಮಣ್ಣ-ರತಿದೇವಿ ಮೂರ್ತಿ ಪ್ರತಿಷ್ಟಾಪನೆ

ಹರಿಹರ : ಕಾಮಣ್ಣ-ರತಿದೇವಿ ಮೂರ್ತಿ ಪ್ರತಿಷ್ಟಾಪನೆ

ಹರಿಹರ, ಮಾ. 5 – ನಗರದ ನಡವಲಪೇಟೆ ಯುವಕ ಸಂಘದ ವತಿಯಿಂದ 61 ನೇ ವರ್ಷದ ಹೋಳಿ ಹಬ್ಬದ ನಿಮ್ಮಿತ್ತವಾಗಿ ಕಾಮಣ್ಣ ರತಿದೇವಿ ಮೂರ್ತಿಯನ್ನು ಮೆರವಣಿಗೆ ನಂತರ ಪ್ರತಿಷ್ಟಾಪನೆ ಮಾಡಲಾಯಿತು.

ನಾಡಿದ್ದು ದಿನಾಂಕ 7 ರಂದು 6 ಗಂಟೆಯಿಂದ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ, ರಾತ್ರಿ 12 ಗಂಟೆಗೆ ಪೂರ್ವ ನಕ್ಷತ್ರದ ಶುಭಾಂಶದಲ್ಲಿ ಕಾಮದಹನ ಮಾಡಲಾಗುತ್ತದೆ. ದಿನಾಂಕ 8 ರಂದು ಬುಧವಾರ ಬೆಳಗ್ಗೆ ಹೋಳಿ ನಂತರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆಯಲ್ಲಿ ದುರುಗೋಜಿ ಮೋಹನ್, ಚಂದನ್ ಮೂರ್ಕಲ್, ಜಗದೀಶ್ ಮಹೇಂದ್ರಕರ್, ಪ್ರಕಾಶ್ ತೇಲಕರ್, ಸಕ್ರಿ, ಹೋವಳೆ ಚಂದ್ರಕಾಂತ್, ರಾಖೇಶ್, ಸ್ವಾಮಿ, ಪ್ರವೀಣ್ ಮಜ್ಜಿಗೆ ಇದ್ದರು.

error: Content is protected !!