ಮಲೇಬೆನ್ನೂರು, ಫೆ.12- ದೇವರಬೆಳಕೆರೆ ಗ್ರಾಮದ ಆರಾಧ್ಯದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಭಾನುವಾರ ಸಾಯಂಕಾಲ ನಡೆದ ಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಎಲ್ಲರ ಗಮನ ಸೆಳೆದವು. ಎದೆ ಜಲ್ ಎನ್ನುವ ಈ ಪವಾಡಗಳನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗೊರವಪ್ಪ ಅವರುಗಳ ತ್ರಿಶೂಲವನ್ನು ಕಾಲಿಗೆ, ಕೈಗೆ ಹಾಯಿಸುವ ದೃಶ್ಯ ಮೈ ಜುಮ್ ಎನ್ನಿಸಿತು. ಸಂಜೆ ಓಕಳಿಯೊಂದಿಗೆ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.
ದೇವರಬೆಳಕೆರೆ : ಗಮನ ಸೆಳೆದ ಪವಾಡಗಳು
![26 dbkere 13.02.2023 ದೇವರಬೆಳಕೆರೆ : ಗಮನ ಸೆಳೆದ ಪವಾಡಗಳು](https://janathavani.com/wp-content/uploads/2023/02/26-dbkere-13.02.2023-860x492.jpg)