ಹರಪನಹಳ್ಳಿ, ಮಾ. 20- ಕುರು ಪಾಂಡವರ ದಾಯಾದಿಗಳ ಜಗಳವನ್ನು ವಿಮರ್ಶಾತ್ಮಕವಾಗಿ ರಚಿಸಿದ `ಸುಯೋಧನ’ ರಂಗ ಪ್ರಯೋಗವು ಆದರ್ಶ ಮಹಿಳಾ ಮಂಡಳಿಯ ರಂಗಭೂಮಿ ಕಲಾವಿದರು ತುಮಕೂರು, ಚಿತ್ರದುರ್ಗ, ಹರಪನಹಳ್ಳಿ ತಾಲ್ಲೂಕಿನಲ್ಲಿ ಏಳು ಪ್ರಯೋಗಗಳನ್ನು ನೀಡುವಲ್ಲಿ ಸಂಘಟಿಕರ ಪ್ರಯತ್ನ ಸಾರ್ಥಕವಾಗಿಸಿತು.
ಮಹಿಳೆಯರು ಪುರುಷ ಪಾತ್ರ ಭೀಮ, ಕರ್ಣ ವೇಷದಲ್ಲಿ ನಟಿಸಿ ಪುರುಷರಿಗೇನು ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದರು. ಎಲ್ಲಾ ಪಾತ್ರಧಾರಿಗಳ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.