ಹೊಸ ಕುಂದವಾಡದಲ್ಲಿ ವೈಭವದ `ದುರ್ಗಾಂಬಿಕಾ ಕೆಂಡೋತ್ಸವ’

ದಾವಣಗೆರೆ,ಅ,29- ಸಮೀಪದ ಹೊಸ ಕುಂದವಾಡದಲ್ಲಿ ದಸರಾ ಹಬ್ಬವಾದ ಮೂರು ದಿನಗಳ ನಂತರ ಶ್ರೀ ದುರ್ಗಾಂಬಿಕಾ ದೇವಿಯ ಅಗ್ನಿಕುಂಡ ಪ್ರವೇಶ ಹಾಗೂ ಕೆಂಡೋತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ವೈಭವದಿಂದ ಜರುಗಿತು.

ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾದ ದೇವಿಯನ್ನು ಹೊತ್ತು ಕೆಂಡ ಹಾದು ಭಕ್ತರು ದೇವಿಯ ಕೃಪೆಗೆ ಪಾತ್ರರಾದರು. ಇನ್ನು ಆರೋಗ್ಯ ಸಮಸ್ಯೆ,ಹಣಕಾಸು ಸಮಸ್ಯೆ, ರಾಜಕೀಯ ಪ್ರವೇಶ ಇತ್ಯಾದಿ ಹರಕೆಯನ್ನು ಹೊತ್ತ ಭಕ್ತರು ಸಹ ಮನದಲ್ಲಿ ದೇವಿಯನ್ನು ಸ್ಮರಿಸುತ್ತಾ ಕೆಂಡ ಹಾದು ತಮ್ಮ ಹರಕೆ ತೀರಿಸಿ, ಭಕ್ತಿ ಸಮರ್ಪಿಸಿದರು.

error: Content is protected !!