ಎಥೆನಾಲ್, ಯೂರಿಯಾ ಕೈಗಾರಿಕೆಗಳ ಶೀಘ್ರ ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆ

ಹರಿಹರ, ಅ.22- ಹನಗವಾಡಿ ಹೊರ ವಲಯದಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಎಥೆನಾಲ್ ಕೈಗಾರಿಕೆ ಮತ್ತು ಕುರುಬರಹಳ್ಳಿಯಲ್ಲಿ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ಯೂರಿಯಾ ಕೈಗಾರಿಕೆಗಳ ಕಾಮಗಾರಿ ಪ್ರಾರಂಭ ಮಾಡುವಂತೆ, ಇಂದು ನಗರದಲ್ಲಿ ಎನ್.ಹೆಚ್. ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮನವಿ ಅರ್ಪಿಸಲಾಯಿತು.

ಮೆರವಣಿಗೆಯು ನಗರದ ನೀರಾವರಿ ಇಲಾ ಖೆಯ ಶ್ರೀ ಗಣೇಶ ದೇವಸ್ಥಾನದಿಂದ ಪ್ರಾರಂಭ ಗೊಂಡು ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ ಮುಖಾಂತರ ಸಂಚಾರಿ ತಹಶೀಲ್ದಾರ್ ಕಛೇರಿಗೆ ತೆರಳಿ ಮನವಿ ಅರ್ಪಿಸಿದರು.

ಈ ವೇಳೆ ಶ್ರೀನಿವಾಸ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಹೆಚ್. ಸುಧಾಕರ್, ರಮೇಶ್ ಮಾನೆ, ನಗರಸಭಾ ಮಾಜಿ ಸದಸ್ಯ ನಾಗರಾಜ್ ಮೆಹರ್ವಾಡೆ, ಎಂ.ಆರ್. ಚಂದ್ರಶೇಖರ್, ವೆಂಕಟೇಶ ಶೆಟ್ಟಿ, ನಾಗರಾಜ್‌ಗೌಡ, ರೇವಣಪ್ಪ ಡಿ., ಸುಚೇತ್ ಪೂಜಾರ್, ಕಾಂತೇಶ್, ಶ್ರೀನಿಧಿ, ಸೋಮಶೇಖರ್, ವಿಜಯ್, ರಾಕೇಶ್, ಮಹ್ಮದ್ ಜಿಲಾಲ್, ಅರುಣ್, ನಾಗರಾಜಪ್ಪ, ಮಧು, ವಿಶ್ವ ಜಿತ್, ಜಯ ಕರ್ನಾಟಕ ಸಂಘಟನೆಯ ಗೋ ವಿಂದ, ಅತಾವುಲ್ಲಾ ಮತ್ತಿತರರು  ಹಾಜರಿದ್ದರು.

error: Content is protected !!