ಕೊರೊನಾ ತೊಲಗಲೆಂದು ಮಹಾಮಂತ್ರ ಅನುಷ್ಠಾನ

ದಾವಣಗೆರೆ, ಜು.11- ಕೊರೊನಾ ಮಹಾಮಾರಿ ತೊಲಗಲಿ ಎಂದು ಕಂಚಿಕೆರೆ ಶ್ರೀ ಬಿದ್ದ ಹನುಮಪ್ಪನ ಮಟ್ಟಿ ಸುಕ್ಷೇತ್ರದ  ಶ್ರೀ ಬಸವರಾಜ ಗುರೂಜಿ   108 ದಿನಗಳ ಕಾಲ ಸುಪ್ರಭಾತದಲ್ಲಿ ಹತ್ತಿ ವೃಕ್ಷದ ಕೆಳಗೆ ಪ್ರಣಮ ಪಂಚಾಕ್ಷರಿ ಮಹಾಮಂತ್ರ ಅನುಷ್ಠಾನ ಕೈಗೊಂಡಿದ್ದು, ಗುರುಪೂರ್ಣಿಮೆಯಂದು ಆಶ್ರಮದಲ್ಲಿ ಮಹಾಮಂಗಳಾರತಿ ಮಾಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ರೇವಣ್ಣ ಬಳ್ಳಾರಿ, ಕೆ. ಪ್ರಕಾಶ್, ಬಿ. ಸಂತೋಷ್ ಕುಮಾರ್, ಸಂಗಪ್ಪ ತೋಟದ್, ಶಿವಸಾಲಿ ಮಲ್ಲಿಕಾರ್ಜುನ, ಟಿ. ಸಂಗಮಾರಾಧ್ಯ, ಮಹಾದೇವಮ್ಮ ಮಲ್ಲಿಕಾರ್ಜುನ, ಕೆಇಬಿ ಮಲ್ಲಿಕಾರ್ಜುನ, ಶಿವಮೂರ್ತಯ್ಯ ಕಾರಿಗನೂರು ಮಠ, ಎನ್.ಜೆ. ನಿಂಗಪ್ಪ, ಮಾಜಿ ನಗರಸಭಾ ಸದಸ್ಯ ಎನ್.ಜೆ. ನಿಂಗಪ್ಪ, ಪತ್ರಕರ್ತ ಬಿ. ಲೋಕೇಶ್ ಕುರುಬರಹಳ್ಳಿ ಇನ್ನಿತರರಿದ್ದರು. 

error: Content is protected !!