ಅರೇಮಲ್ಲಾಪುರದ ಐತಿಹಾಸಿಕ  ಕಲ್ಲುಬಾವಿ ನವೀಕರಣ

ರಾಣೇಬೆನ್ನೂರು, ಜೂ.19- ತಾಲ್ಲೂಕಿನ ಅರೇ ಮಲ್ಲಾಪುರದ ಐತಿಹಾಸಿಕ ಎನ್ನಲಾದ ಕಲ್ಲುಬಾವಿಯನ್ನು ರಿಪೇರಿ ಮಾಡಿ ನವೀಕರಣ  ಗೊಳಿಸುವ ಕಾಮಗಾರಿಗೆ ಸ್ಥಳೀಯ ಶರಣ ಬಸವೇಶ್ವರರ ಮಠದ ಡಾ. ಪ್ರಣವಾನಂದ ರಾಮ ಸ್ವಾಮೀಜಿ ನೇತೃತ್ವದಲ್ಲಿ ಶಾಸಕ ಅರುಣಕುಮಾರ್ ಪೂಜಾರ್ ಚಾಲನೆ ನೀಡಿದರು.

ಗ್ರಾಮದ ಹಿರಿಯರು ಹೇಳುವಂತೆ ಈ ಬಾವಿಯಿಂದ ಗ್ರಾಮದ ಎಲ್ಲ ಜನರಿಗೆ ಕುಡಿಯುವ ನೀರು ದೊರೆಯುತ್ತಿತ್ತು. ರಿಪೇರಿ ಆದ ನಂತರ ಇಲ್ಲಿನ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

ಪಿಡಿಒ ಡಿ.ಬಿ.ಹರಿಜನ ನಾಗಪ್ಪ ನಾಗರಜ್ಜಿ, ಪ್ರಭು ಮುದಿಗೌಡ್ರ, ಬಸಪ್ಪ ಸುರ್ವೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

error: Content is protected !!