ಸಮೃದ್ಧ ಮಳೆ, ಬೆಳೆಗಾಗಿ ನಗರ ದೇವತೆ ಕರಿಗಲ್ಲು ಪೂಜೆ

ದಾವಣಗೆರೆ, ಜೂ.16- ಸಮೃದ್ಧ ಮಳೆ – ಬೆಳೆ ಬರಲೆಂದು ಮತ್ತು ಮಹಾಮಾರಿ ಕೊರೊನಾ ನಿವಾರಣೆಯಾಗಲೆಂದು ಪ್ರಾರ್ಥಿಸಿ ನಗರ ದೇವತೆ  ಶ್ರೀ ದುರ್ಗಾಂಬಿಕಾ ದೇವಿಯ ಕರಿಗಲ್ಲು ಪೂಜೆಯನ್ನು ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರ ಸಂಘದಿಂದ ಇಂದು ನಡೆಸಲಾಯಿತು.

ಹಗೇದಿಬ್ಬ ವೃತ್ತದಲ್ಲಿ 101 ಕೊಡಗಳ ನೀರಿನಿಂದ ಕರಿಗಲ್ಲಿಗೆ ಜಲಾಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. 

ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ, ಕಾರ್ಯಾಧ್ಯಕ್ಷ ಆರ್‌.ಜಿ. ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ, ಖಜಾಂಚಿ ಶಾಂತರಾಜ್, ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನ ಗೌಡ, ಸದಸ್ಯರುಗಳಾದ ಲಕ್ಷ್ಮಿ ನಾರಾಯಣ ಶೆಟ್ಟರು, ಕುಮಾರ್, ಸಿಂಗ್ರಿಹಳ್ಳಿ ಹೇಮಣ್ಣ, ಕಿಶೋರ್, ಸಂಕಣ್ಣ, ಕಾವಲಹಳ್ಳಿ ಜಗದೀಶ್, ಅತ್ತಿಗೆರೆ ರವಿ, ಸುಕುಮಾರ್ ಗುಮ್ಮನೂರು, ಸುರೇಶ್ ಸೇರಿದಂತೆ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!