ಮಲೇಬೆನ್ನೂರು, ಜೂ.14- ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಇಲ್ಲಿನ ಪೊಲೀಸ್ ಠಾಣೆಯ ಪಿಎಸ್ಐ ವೀರಬಸಪ್ಪ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಕೆ.ಆರ್.ಗೌಡ ಸೇರಿದಂತೆ ಪೌರ ಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತರನ್ನು ಇಂಗಳಗೊಂದಿ ಗ್ರಾಮದ ರೈತರಾದ ಜೆ.ಬಿ.ಮಲ್ಲೇಶ್, ಅಶೋಕ್, ದುರ್ಗಪ್ಪ, ಬಸಪ್ಪ ಗುಂಡರ್, ಚಂದ್ರಪ್ಪ ಗೌಡರ್, ಲಕ್ಷ್ಮಪ್ಪ ಅವರು ಮೈಸೂರು ಪೇಟ ಹಾಕಿ ಸನ್ಮಾನಿಸಿ, ಪುಷ್ಪಾರ್ಚನೆ ಮಾಡಿ ಗಮನ ಸೆಳೆದರು.
July 6, 2024