ಮನೆ ಕೆಲಸದವರಿಗೆ ಆಹಾರ ಕಿಟ್ ವಿತರಣೆ

ದಾವಣಗೆರೆ, ಜೂ. 6- ನಗರದ ವಿನಾಯಕ ಬಡಾವಣೆಯಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಮಹಿಳೆಯರು  ಕೊರೊನಾದಿಂದ ಮನೆಗೆಲಸವೂ ಇಲ್ಲದೇ  ಸಂಕಷ್ಟದಲ್ಲಿದ್ದು, ಅವರಿಗೆ ಸರ್ಕಾರಿ ನೌಕರರ ಸಂಘ ಮಾಜಿ ಜಿಲ್ಲಾಧ್ಯಕ್ಷ ಹಾಲೇಶಪ್ಪ ಅವರು ಆಹಾರ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಎಸ್.  ದೇವೇಂದ್ರಪ್ಪ, ಎಸ್.ಆರ್  ಶಾರದಾ, ವಾಗೀಶ್, ದರ್ಶನ್, ಶಶಿಕಲಾ, ರೇಣುಕಮ್ಮ,  ಲಕ್ಷ್ಮಿ ಮತ್ತಿತರರು ಹಾಜರಿದ್ದರು.

error: Content is protected !!