ದೇವಸ್ಥಾನಗಳ ಶುಚಿತ್ವ : ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಗೌರವ

ದಾವಣಗೆರೆ, ಜೂ.7- ಲಾಕ್‌ಡೌನ್ ಪರಿಣಾಮ ಬಂದ್ ಆಗಿದ್ದ ದೇವಸ್ಥಾನಗಳು ನಾಳೆ ಸೋಮವಾರದಿಂದ ತೆರೆಯಲಿದ್ದು, ಈ ಹಿನ್ನೆಲೆಯಲ್ಲಿ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳನ್ನು ಸ್ಯಾನಿಟೈಜರ್‌ ಮೂಲಕ ಸ್ವಚ್ಛತೆಗೆ ಶ್ರಮಿಸುತ್ತಿರುವ ಅಗ್ನಿ ಶಾಮಕ ದಳದ ಸಂಜೀವ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರನ್ನು ನಗರ ಪಾಲಿಕೆಯ 35ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್‌ ಹುಲ್ಮನಿ ಮತ್ತು ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಮನಿ ದಂಪತಿ ಸನ್ಮಾನಿಸಿ, ಗೌರವಿಸಿದರು.

error: Content is protected !!