ಮುರುಘಾ ಮಠಕ್ಕೆ ಇಂದಿನಿಂದ ಸಾರ್ವಜನಿಕರ ಪ್ರವೇಶ

ಚಿತ್ರದುರ್ಗ,  ಜೂ. 7- ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ 2 ತಿಂಗಳಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿ ಸಲಾಗಿದ್ದ ಮುರುಘ ರಾಜೇಂದ್ರ ಬೃಹನ್ಮಠ ಹಾಗೂ ಮುರುಘಾ ವನಕ್ಕೆ ನಾಳೆ ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಶ್ರೀಮಠದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರಣರು, 2020ನೇ ಇಸವಿಯು ಅನಾ ರೋಗ್ಯಕರವಾದ ಸಂದರ್ಭವನ್ನು ಎದುರಿಸು ತ್ತಿದ್ದು, ಅನೇಕ ತಲ್ಲಣಗಳು, ಕಂಡರಿಯದ ದುಸ್ಥಿತಿ, ಅಸಹಾಯಕ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿದರು.

ಸುಮಾರು 70 ದಿನಗಳು ಕಳೆದಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲಾಕ್‍ಡೌನ್ ಘೋಷಿಸಿದ್ದರು. ಈಗ 5ನೇ ಲಾಕ್‍ಡೌನ್. ಆರ್ಥಿಕ ವ್ಯವಸ್ಥೆಯ ಮೇಲೆ ಉಂಟಾಗಿರುವ ದುಷ್ಪರಿಣಾಮಗಳಿಂದ ಹಲ ವಾರು ಉತ್ಪಾದನಾ ವಲಯಗಳು, ಕೈಗಾರಿಕೆ ಗಳು ನಿಂತುಹೋಗಿರುವ ಕುರಿತು ವಿಷಾದಿಸಿದರು.   

ಶ್ರೀಮಠದ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ. ಶ್ರೀಮಠಕ್ಕೆ ಮತ್ತು ಮುರುಘಾ ವನಕ್ಕೆ ಭೇಟಿ ನೀಡುವ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಬೇಕು. ಕೋವಿಡ್-19 ಇರುವವರೆಗೆ ನಾವು ಶಿಸ್ತನ್ನು ಅಳವಡಿಸಿಕೊಳ್ಳಬೇಕು, ಅಂತರ ವನ್ನು ಮೀರ ಬಾರದು. ಮಾನವ ದನಕರುಗಳಿಗೆ ಮೂಗು ದಾರ ಹಾಕಿದಂತೆ ಕೊರೊನಾ ಮಾನವನಿಗೆ ಮೂಗುದಾರ ಹಾಕಿದೆ. ಒಂದೆರಡು ದಿನ ನೋಡಿಕೊಂಡು ನಿತ್ಯ ದಾಸೋಹವನ್ನು ಪ್ರಾರಂ ಭಿಸಲಾಗುವುದು ಎಂದು ಶರಣರು ಹೇಳಿದರು.

error: Content is protected !!