ಸಿಜಿ ಆಸ್ಪತ್ರೆಯ ಹಿಂಭಾಗ ನಿಧಾನಗತಿ ಚರಂಡಿ ಕಾಮಗಾರಿ

ಕಾಂಗ್ರೆಸ್ ಸದಸ್ಯರಿಂದ ಗುತ್ತಿಗೆದಾರರಿಗೆ ತರಾಟೆ

ದಾವಣಗೆರೆ, ಜೂ. 5- ನಗರದ ಸಿ.ಜಿ. ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ 14ನೇ ಹಣಕಾಸು ಯೋಜನೆಯಡಿ 25 ಲಕ್ಷ ಮೊತ್ತದ ಒಳಚರಂಡಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಟೆಂಡರ್ ಕಾಲಮಿತಿ ಅವಧಿ ಮುಗಿದಿದ್ದರೂ ಸಹ ಕೆಲಸ ಮುಗಿಸದೇ, ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿರುವುದರ ವಿರುದ್ಧ ಕಾಂಗ್ರೆಸ್ ಪಾಲಿಕೆ ಸದಸ್ಯರುಗಳು ಕಾಮಗಾರಿ ಸ್ಥಳಕ್ಕೆ ಗುತ್ತಿಗೆದಾರರನ್ನು ಕರೆಸಿ ತರಾಟೆ ತೆಗೆದುಕೊಂಡರು. ಆದಷ್ಟು ಬೇಗ ಕೆಲಸ ಮುಗಿಸಿ ಕೊಡುವುದಾಗಿ ಗುತ್ತಿಗೆದಾರರು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರುಗಳಾದ
ಗಡಿ ಗುಡಾಳ್ ಮಂಜುನಾಥ್, ದೇವರಮನೆ ಶಿವಕುಮಾರ್, ಕೆ. ಚಮನ್‌ಸಾಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ,  ಮಾಜಿ ನಗರಸಭಾ ಸದಸ್ಯ ಎಸ್. ಮಲ್ಲಿಕಾರ್ಜುನ್, ಎನ್.ಎಸ್.ಯು.ಐ ನ ಮುಜಾಹಿದ್, ಕೆ.ಎಲ್. ಹರೀಶ್ ಬಸಾಪುರ ಮುಂತಾದವರು ಉಪಸ್ಥಿತರಿದ್ದರು.

error: Content is protected !!