ಮಲೇಬೆನ್ನೂರಿನಲ್ಲಿ ಉತ್ತಮ ಮಳೆ ; ರಸ್ತೆ ತುಂಬೆಲ್ಲಾ ಹರಿದ ಚರಂಡಿ ನೀರು

ಮಲೇಬೆನ್ನೂರು, ಜೂ. 1- ಭಾನುವಾರ ಸಾಯಂಕಾಲ ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಭತ್ತ ಕಟಾವಿಗೆ ತೀವ್ರ ತೊಂದರೆಯಾಗಿದೆ. ಮಲೇಬೆನ್ನೂರು ಪಟ್ಟಣದಲ್ಲಿ ಮಳೆ ನೀರಿನಿಂದಾಗಿ ಚರಂಡಿಗಳು ತುಂಬಿ ಹೆದ್ದಾರಿ ತುಂಬೆಲ್ಲಾ ನೀರು ಹರಿಯಿತು. ಇದರಿಂದಾಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಬಗ್ಗೆಯೂ ವರದಿಯಾಗಿದೆ.

ಭತ್ತ ಕಟಾವಿಗೆ ತೊಂದರೆ ; ಕಳೆದ ಎರಡು ದಿನಗಳ ಹಿಂದೆ ಮತ್ತು ಭಾನುವಾರ ಸುರಿದ ಮಳೆಯಿಂದಾಗಿ ಭತ್ತ ಕಟಾವಿಗೆ ತೊಂದರೆ ಆಗುವುದರ ಜೊತೆಗೆ ಮಳೆ ಹೊಡೆತಕ್ಕೆ ಭತ್ತ ನೆಲಕಚ್ಚಿದೆ.

ಭತ್ತಕ್ಕೆ ಕನಿಷ್ಠ ಬೆಲೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಪದೇ ಪದೇ ಬರುತ್ತಿರುವ ಮಳೆ ಮತ್ತಷ್ಟು ನಷ್ಟ ಉಂಟು ಮಾಡುತ್ತಿದೆ.

ಇನ್ನೊಂದೆಡೆ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ಈ ಮಳೆ ಜೀವಕಳೆ ತಂದಿದೆ, ತಡವಾಗಿ ನಾಟಿ ಮಾಡಿದ್ದ ರೈತರಿಗೆ ಈ ಮಳೆಯ ಅವಶ್ಯಕತೆ ಇತ್ತು ಎಂದು ಹೇಳಲಾಗುತ್ತಿದೆ.

error: Content is protected !!