ಪಾದಯಾತ್ರೆ ತೆರಳದ ಭಕ್ತರಿಂದ ಪೂಜೆ

ಹೊನ್ನಾಳಿ, ಮಾ.7 – ಪ್ರತಿವರ್ಷ ಕೊಟ್ಟೂರು ಜಾತ್ರೆ ಅಂಗವಾಗಿ ಪಾದ ಯಾತ್ರೆ ತೆರಳುತ್ತಿದ್ದ ಹೊನ್ನಾಳಿ ಭಕ್ತರು ಇಂದು ಪಟ್ಟಣದ ಗೌಡರ ಬೀದಿಯಲ್ಲಿನ ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿನ ಸ್ಥಳೀಯ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಟ್ಟೂರು ಪಾದಯಾತ್ರೆಗೆ ಪ್ರತಿ ವರ್ಷ ತೆರಳುತ್ತಿದ್ದರು. ಈ ಬಾರಿ ಪಾದಯಾತ್ರೆ ತೆರಳಲು ಸಾಧ್ಯವಾಗದ ಕಾರಣ ಇಲ್ಲಿನ ದೇವರಿಗೆ ಅಭಿಷೇಕ ಮಹಾಮಂಗಳಾರತಿಯೊಂದಿಗೆ ಪ್ರಸಾದ ವ್ಯವಸ್ಥೆಯನ್ನು ಭಕ್ತರಿಗೆ ಆಯೋಜಕರು ಕಲ್ಪಿಸಿದ್ದರು.

error: Content is protected !!