ಮಾಗಿ ಕುಟುಂಬದಿಂದ ಧರ್ಮಸ್ಥಳಕ್ಕೆ ಒಂದು ಲೋಡ್ ಅಕ್ಕಿ ಸಮರ್ಪಣೆ

ದಾವಣಗೆರೆ, ಜು.13- ನಗರದ ದಿ|| ಶ್ರೀಮತಿ ಬಸಮ್ಮ ಮತ್ತು ಶ್ರೀ ವೀರಬಸಪ್ಪ ಮಾಗಿ ಕುಟುಂ ಬದ ವತಿಯಿಂದ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಒಂದು ಲೋಡ್ ಅಕ್ಕಿಯನ್ನು ಅಕ್ಕಿ ವ್ಯಾಪಾರಿಯೂ ಆಗಿರುವ  ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಮಾಗಿ ಅವರು ನಗರದ  ಹಳೇಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು  ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಲು ಧರ್ಮಸ್ಥಳಕ್ಕೆ ತೆರಳಿದರು. 

ಅಕ್ಕಿ ಲೋಡಾದ ಲಾರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಚಾಲನೆ ನೀಡಿದರು. 

ಈ ಸಂದರ್ಭ ದಲ್ಲಿ ಪಾಲಿಕೆ ಸದಸ್ಯ ಶಿವನಗೌಡ ಟಿ.ಪಾಟೀಲ, ಟಿಂಕರ್ ಮಂಜಣ್ಣ, ಅಭಿಷೇಕ್ ಗಾಂಜಿ, ಬಿ.ಪಿ. ಎಂ. ಜಗದೀಶ್, ಸತೀಶ್ ಹುಬ್ಬಳ್ಳಿ, ಅಣ್ಣಪ್ಪ ಸ್ವಾಮಿ, ಮಂಜು ನಾಥ್, ಸಂಗಮೇಶ್‌ ಗದಗ, ಮಾಗಿ ಕುಮಾರ್, ಟಿಎಸ್ ಎಂ, ಮಲ್ಲಿಕಾರ್ಜುನ್, ಬಸವಲಿಂಗ, ಜಯರಾಜ್ ಮೇಟಿ, ಸುರೇಶ್, ನಿಖಿಲ್ ಮಾಗಿ, ವಿನಾಯಕ ಬ್ಯಾಡಗಿ, ಗಣೇಶ್‌, ಹರ್ಷ ಮಾಗಿ, ಪಿ.ಎಸ್.ಪರಶುರಾಮ್‌, ಹಲುವಾಗಲು ಶಿವಣ್ಣ ಮತ್ತಿತರರಿದ್ದರು.

error: Content is protected !!