ನಗರದಲ್ಲಿ ದುರ್ಗಾ ಪೂಜೆ, ದುರ್ಗಾ ದೀಪ ನಮಸ್ಕಾರ

ದಾವಣಗೆರೆ, ಫೆ.7- ವಿಶ್ವ ಮಧ್ವ ಮಹಾಪರಿಷತ್ (ಬೆಂಗಳೂರು) ವತಿಿಯಂದ ನಗರದ ಪಿಜೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ದುರ್ಗಾ ಪೂಜೆ ಹಾಗೂ ದುರ್ಗಾ ದೀಪ ನಮಸ್ಕಾರ ವಿಶೇಷ ಪೂಜಾ ಕೈಂಕರ್ಯಗಳನ್ನು  ಮೊನ್ನೆ ಸಂಜೆ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಅರ್ಚಕ ರಾಘವೇಂದ್ರ ಕುಲಕರ್ಣಿ ಅವರ ಅಮೃತ ಹಸ್ತದ ಆಶೀರ್ವಾದದೊಂದಿಗೆ ವಾಸುದೇವ ಆಚಾರ್ ಪಲ್ಲಕ್ಕಿ ದಂಪತಿಯಿಂದ ದುರ್ಗಾ ಪೂಜೆ ಮತ್ತು ದುರ್ಗಾ ದೀಪ ನಮಸ್ಕಾರ ನೆರವೇರಿಸಲಾಯಿತು. ಪಂಡಿತ ಡಾ. ವೆಂಕಟಗಿರೀಶಾಚಾರ್ ಮತ್ತು ಜಯತೀರ್ಥಾಚಾರ್ ಒಡೆಯರ್ ಅವರುಗಳು ಪ್ರವಚನ ನಡೆಸಿದರು. 

ಭೀಮಸೇನಾಚಾರ್ ಕಲ್ಲಾಪುರ, ಕಂಪ್ಲಿ ಗುರುರಾಜಾಚಾರ್, ಶ್ರೀಧರ್ ಘಟಿಕರ್, ವೆಂಕ ಟೇಶ್ ನವರತ್ನ, ಪಿ.ಕೆ. ಪ್ರಕಾಶ್, ಸುತೀರ್ಥ ಕಟ್ಟಿ, ರಾಮಗೋಪಾಲ್, ಶಾಂತೇಶ್ ಗುತ್ತಲ್, ಹೆಚ್.ಎಸ್. ಗುರುರಾಜ್, ಪ್ರಾಣೇಶಾಚಾರ್ ಕಡೂರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!