ಹಸಿವಿಗೆ ಅನ್ನ ಎಷ್ಟು ಮುಖ್ಯವೋ, ಸಾಕ್ಷರತೆಯ ಅರಿವು ಕೂಡ ಅಷ್ಟೇ ಮುಖ್ಯ

ಹರಪನಹಳ್ಳಿ, ಜ.8 – ಹಸಿವಿಗೆ ಅನ್ನ ಎಷ್ಟು ಮುಖ್ಯವೋ ಸಾಕ್ಷರತೆಯ ಅರಿವು ಅಷ್ಟೇ ಮುಖ್ಯ. ಪುಲೆ ದಂಪತಿ ಅಂದು ಹಚ್ಚಿದ ಸಾಕ್ಷರತಾ ಜ್ವಾಲೆ ನಿರಂತರವಾಗಿ ಬೆಳಗುತ್ತಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಸವರಾಜ್ ಸಂಗಪ್ಪನವರ್ ಹೇಳಿದರು.

ಪಟ್ಟಣದ ಬಿಸಿಎಂ ಹಾಸ್ಟೆಲ್ ಸಭಾಂಗಣದಲ್ಲಿ ವಿಶ್ವಚೇತನ ಸಂಸ್ಥೆ,  ಲಡಾಯಿ ಪ್ರಕಾಶನದ ಸಹಯೋಗದಲ್ಲಿ ಸಾವಿತ್ರಿ ಬಾಯಿ ಪುಲೆ ಜನ್ಮ ದಿನಾಚರಣೆಯಲ್ಲಿ ಪುಸ್ತಕ ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದ ಮಹಾನ್ ಚೇತನಗಳಾದ ಮಹತ್ಮಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಮುಂಚಿತವಾಗಿ ಜನಿಸಿದ್ದ ಸಾವಿತ್ರ ಬಾಯಿ ಪುಲೆ ಅವರು, ಮೇಲ್ವರ್ಗದವರ ತೀವ್ರ ವಿರೋಧದ ನಡುವೆಯೂ ಶಾಲೆಯನ್ನು ತೆರೆದು ಮಹಿಳೆ ಯರಿಗೆ ಶಿಕ್ಷಣ ಕೊಡಿಸಿ, ಅಕ್ಷರಸ್ಥರನ್ನಾಗಿ ಮಾಡಿದ್ದಾರೆ. ಈ ಮೂಲಕ ಬ್ರಿಟಿಷರಿಂದ ಭಾರತ ಮೊದಲ ಮಹಿಳಾ ಶಿಕ್ಷಕಿ ಎನ್ನುವ ಬಿರುದಿಗೆ ಪಾತ್ರರಾಗಿದ್ದರು. ಶಿಕ್ಷಣ, ಸಾಕ್ಷರತೆ ಜಗತ್ತನ್ನು ನೋಡುವ ಕಿಟಕಿಗಳಾಗಿವೆ. ಭೂತಕಾಲ, ವರ್ತಮಾನ, ಭವಿಷತ್ ಕಾಲದ ಪ್ರಜ್ಞೆಯಲ್ಲಿ ಬದುಕು ವವರು ಏನಾದರೂ ಸಾಧನೆ ಮಾಡುತ್ತಾರೆ ಎಂದರು. 

ಸಾವಿತ್ರಿ ಅವರ ಕುಟುಂಬ ಹೆರಿಗೆ ಕೇಂದ್ರ, ವಿಧವೆಯರಿಗೆ ಪುನರ್ವಸತಿ ಕಲ್ಪಿಸಿ ನಾಡಿನ ಗಮನ ಸೆಳೆದಿದ್ದಾರೆ. ಅಂತಹ ಸಾಧಕಿ ಮಹಿಳೆಯ ಸಾಧನೆ ಕೆಲ ವರ್ಷಗಳಿಂದೀಚೆಗೆ ಪ್ರವರ್ಧಮಾನಕ್ಕೆ ಬಂದಿದೆ ಎಂದರು. ಗದಗ ಲಡಾಯಿ ಪ್ರಕಾಶನದ ಬಸವರಾಜ್ ಅವರಿಂದ ಸಾವಿತ್ರಿ ಬಾಯಿ ಪುಲೆ ಪುಸ್ತಕಗಳನ್ನು ಎರಡು ವಸತಿ ನಿಲಯಗಳಿಗೆ ಕೊಡುಗೆಯಾಗಿ ನೀಡಲಾಯಿತು.

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಎನ್.ಜಿ.ಬಸವರಾಜ್, ಬಿಸಿಎಂ ಹಾಸ್ಟೆಲ್ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ, ಜೆಸಿಐ ಸ್ಫೂರ್ತಿ ಸಂಸ್ಥೆ ಅಧ್ಯಕ್ಷ ಟಿ.ಎಂ.ವೀರೇಶ್ ಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಡಿ.ವಿಶ್ವನಾಥ್ ಸೇರಿದಂತೆ ಇತರರು ಇದ್ದರು.

error: Content is protected !!