ಸರಳ `ಹರ ಜಾತ್ರಾ’ ಮಹೋತ್ಸವ

ಸರಳ `ಹರ ಜಾತ್ರಾ’ ಮಹೋತ್ಸವ

ಹರಿಹರ, ಜ.14- ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಸರಳವಾಗಿ ನಡೆದ `ಹರ ಜಾತ್ರಾ’ ಮಹೋತ್ಸವದ ನಿಮಿತ್ತವಾಗಿ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮಿಗಳು ಇಷ್ಟಲಿಂಗ ಪೂಜೆಯನ್ನು ಮಾಡುವ ಮೂಲಕ ಹರ ಜಾತ್ರಾ ಮಹೋತ್ಸವ ಆಚರಿಸಿದರು. 

ಈ ವೇಳೆ ಸಾಂಕೇತಿಕವಾಗಿ ನಡೆದ ಹರ ಜಾತ್ರಾ ಮಹೋತ್ಸವದಲ್ಲಿ  ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ್‌ ನಿರಾಣಿ, ಶಾಸಕ ಬಿ.ಪಿ. ಹರೀಶ್ ಮಠಕ್ಕೆ ಆಗಮಿಸಿ, ಹರ ದೇವರ ಮತ್ತು ಲಿಂಗೈಕ್ಯ ಜಗದ್ಗುರು ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ಗದ್ದುಗೆಯ ಮತ್ತು ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮಿಗಳವರಿಂದ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪಂಚಮಸಾಲಿ ಗುರುಪೀಠದ ಧರ್ಮದರ್ಶಿಗಳಾದ ಬಿ.ಸಿ. ಉಮಾಪತಿ, ಪಿ.ಡಿ. ಶಿರೂರು, ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್, ಪ್ರಕಾಶ್ ಪಾಟೀಲ್ ವಕೀಲರು, ಜಿ.ಬಿ. ಹಾಲೇಶಗೌಡ್ರು ಗುತ್ತೂರು, ಬೆಟ್ಟನಗೌಡ ಹರಪನಹಳ್ಳಿಹಾಗೂ ಇತರರು ಹಾಜರಿದ್ದರು. 

error: Content is protected !!