ಕಿಡ್ನಿ ವೈಫಲ್ಯ: ನೆರವು ನೀಡಲು ಮನವಿ

ದಾವಣಗೆರೆ, ಜ. 9- ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಆಟೋ ಚಾಲಕ ವಿಜಯ್‌ಕುಮಾರ್ ಅವರ ಚಿಕಿತ್ಸೆಗೆ ನೆರವು ನೀಡಬೇಕೆಂದು ಆತನ ಸ್ನೇಹಿತ ಎನ್.ವಿ. ಶಮಂತ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ವಿಜಯ್ ಕುಮಾರ್, ಚಿಕ್ಕನಹಳ್ಳಿ ಹೊಸ ಬಡಾವಣೆ ವಾಸಿಯಾಗಿದ್ದು, ಅವರ ಎರಡೂ ಕಿಡ್ನಿಗಳು ವೈಫಲ್ಯವಾಗಿರುವುದರಿಂದ ವಾರದಲ್ಲಿ ಮೂರು ಬಾರಿ ಯಾದರು ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ರಕ್ತದೊತ್ತಡ, ಮಧುಮೇಹ ಮತ್ತು ಕಣ್ಣಿನ ಸಮಸ್ಯೆ ಇರುವ ಕಾರಣ ಆಟೋ ಚಾಲನೆ ಮಾಡಲು ಸಾಧ್ಯ ವಾಗುತ್ತಿಲ್ಲ. ಚಿಕಿತ್ಸೆಗೆ ಹಣ ಹೊಂದಿಸಲು ಆಗುತ್ತಿಲ್ಲ ಎಂದರು. ಮನೆಯಲ್ಲಿ ತಂದೆ-ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದು, ಜೀವನ ನಿರ್ವಹಣೆ ಕಷ್ಟಕರ ವಾಗಿದೆ. ದಾನಿಗಳು ಸಹಾಯ ಹಸ್ತ ಚಾಚುವಂತೆ ಅವರು ಮನವಿ ಮಾಡಿದರು.

ಸಹಾಯ ಮಾಡಲಿಚ್ಛಿಸುವವರು ವಿಜಯ್ ಕುಮಾರ್ ಎನ್. ಕೆನರಾ ಬ್ಯಾಂಕ್ ಖಾತೆ ನಂ: 1590101149364, IFSC code CNRB0001590, phonepay: 9060000107 ಹಣ ಕಳುಹಿಸಬಹುದು. ಸುದ್ದಿಗೋಷ್ಠಿಯಲ್ಲಿ ವಿಜಯ್ ಕುಮಾರ್, ನಿರ್ಮಲ, ಎಂ. ನಾಗರಾಜ್, ರವಿ ಉಪಸ್ಥಿತರಿದ್ದರು.

error: Content is protected !!