ಡಾ. ಎಸ್. ಶಿಶುಪಾಲ ಅವರಿಗೆ ಡಾ. ಹೆಚ್.ಎನ್. ನರಸಿಂಹಯ್ಯ ಪ್ರಶಸ್ತಿ

ಡಾ. ಎಸ್. ಶಿಶುಪಾಲ ಅವರಿಗೆ ಡಾ. ಹೆಚ್.ಎನ್. ನರಸಿಂಹಯ್ಯ ಪ್ರಶಸ್ತಿ - Janathavaniದಾವಣಗೆರೆ, ಡಿ. 26- ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್  (ದೊಡ್ಡಬಳ್ಳಾಪುರ) ಕೊಡಮಾಡುವ ಡಾ. ಹೆಚ್.ಎನ್. ನರಸಿಂಹಯ್ಯ ಪ್ರಶಸ್ತಿಗೆ ನಗರದ ದಾವಣಗೆರೆ ವಿವಿ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ ಭಾಜನರಾಗಿದ್ದಾರೆ. ವಿಜ್ಞಾನವನ್ನು ತಮ್ಮ ಲೇಖನಗಳ ಮೂಲಕ ಜನರಿಗೆ ತಲುಪಿಸಿ ವೈಜ್ಞಾನಿಕ ಚಿಂತನೆಯನ್ನು ಹೆಚ್ಚಿಸುವಲ್ಲಿ  ಸಲ್ಲಿಸುತ್ತಿರುವ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಇದೇ ದಿನಾಂಕ 29 ಮತ್ತು 30ರಂದು ನಡೆಯಲಿರುವ ವಿಜ್ಞಾನ ಸಮ್ಮೇಳನದಲ್ಲಿ
ಡಾ. ಎಸ್. ಶಿಶುಪಾಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

error: Content is protected !!