ಗೋಪನಾಳು ಹಾ.ಉ.ಸಂಘಕ್ಕೆ ಅಧ್ಯಕ್ಷ ಸಿದ್ಧಲಿಂಗೇಶ್, ಉಪಾಧ್ಯಕ್ಷೆ ಸರ್ವಮಂಗಳ

ದಾವಣಗೆರೆ, ಡಿ. 26- ತಾಲ್ಲೂಕಿನ ಗೋಪನಾಳು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆೆ.

ಅಧ್ಯಕ್ಷರಾಗಿ ಎಸ್.ಬಿ. ಸಿದ್ಧಲಿಂಗೇಶ್ (ಸಾಮಾನ್ಯ ಕ್ಷೇತ್ರ), ಉಪಾಧ್ಯಕ್ಷರ ನ್ನಾಗಿ ಸರ್ವಮಂಗಳ ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಹೆಚ್.ಕೆ. ಪಾಲಾಕ್ಷಪ್ಪ, ಬಿ.ಸಿ. ಮಲ್ಲಿಕಾರ್ಜುನ್, ಜಿ.ಎಸ್. ರಾಜು, ಎ.ಎಂ. ವಿಶ್ವೇಶ್ವರಯ್ಯ, ಎನ್. ಕರಿಬಸಪ್ಪ (ಸಾಮಾನ್ಯ), ಡಿ.ಎನ್. ಚಂದ್ರಕಲಾ (ಮಹಿಳಾ ಮೀಸಲು), ಕೆ. ಹನುಮಂತಪ್ಪ (ಹಿಂದುಳಿದ ವರ್ಗ `ಎ’ ಮೀಸಲು),ಮಹಮ್ಮದ್ ಅಲ್ಲಾಭಕ್ಷಿ (ಹಿಂದುಳಿದ ವರ್ಗ `ಬಿ’ ಮೀಸಲು), ಹೆಚ್. ಓಬಳೇಶ್ (ಪರಿಶಿಷ್ಟ ಪಂಗಡ ಮೀಸಲು), ಎ.ಕೆ. ರೇವಣಸಿದ್ಧಪ್ಪ (ಪರಿಶಿಷ್ಟ ಜಾತಿ ಮೀಸಲು) ಇವರು ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. 

error: Content is protected !!