ಸಚಿವ ಸ್ಥಾನದಿಂದ ಶಿವಾನಂದ ಪಾಟೀಲರ ತಕ್ಷಣವೇ ವಜಾಕ್ಕೆ ಒತ್ತಾಯ

ಸಚಿವ ಸ್ಥಾನದಿಂದ ಶಿವಾನಂದ ಪಾಟೀಲರ ತಕ್ಷಣವೇ ವಜಾಕ್ಕೆ ಒತ್ತಾಯ - Janathavaniದಾವಣಗೆರೆ, ಡಿ.26- ರಾಜ್ಯದ ರೈತರನ್ನು ಅವಮಾ ನಿಸಿದ ಸಚಿವ ಶಿವಾನಂದ ಪಾಟೀಲರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡುವಂತೆ   ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.             

ಸಾಲ ಮನ್ನಾ ಮಾಡಿ ಬಿಟ್ಟರೆ ರೈತರ ಜೀವನ ನಡೆಯುತ್ತದೆಯೇ?  ರೈತರು  ಆಸೆಪಟ್ಟರೆ ಬರಗಾಲ ಬರುತ್ತದೆಯೇ? ರೈತರ ಆಸೆಯಂತೆ ಮಳೆ ಬರುತ್ತದೆಯೇ? ಬರಗಾಲವಾಗಲೀ ಅಥವಾ ಮಳೆಗಾಲವಾ ಗಲೀ ಪ್ರಕೃತಿ ನಿಯಮ. ಯಾರು ಅಂದುಕೊಂಡಂತೆ ನಡೆಯುವುದಿಲ್ಲ.  ಅತಿವೃಷ್ಟಿ, ಅನಾವೃಷ್ಟಿ ಎಂಬುದು ನೈಸರ್ಗಿಕ ವಿಕೋಪ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ನಿಮಗೆ.  ರೈತರು ಭೂಮಿಯನ್ನು ನಂಬಿರುತ್ತಾರೆ. ಭೂಮಿಯಿಂದ ಬರುವ ಆದಾಯದಿಂದ ಜೀವನ ಕಟ್ಟಿಕೊಳ್ಳುತ್ತಾರೆ. ಇಂಥ ಸಾಮಾನ್ಯ ಜ್ಞಾನವು ಇಲ್ಲದ ತಮಗೇಕೆ ಸಚಿವ ಸ್ಥಾನ ಎಂದು ಪ್ರಕಾಶ್ ಪ್ರಶ್ನಿಸಿದರು.

error: Content is protected !!