ನಂದಿಗುಡಿ ಬೃಹನ್ಮಠದಲ್ಲಿ ಇಂದು ಶ್ರೀಗುರು ಕೆಂಚವೀರೇಶ್ವರ ಶ್ರೀಗಳವರ ಪುಣ್ಯಸ್ಮರಣೆ ಮತ್ತು ಶ್ರೀ ಸಿದ್ಧಾರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ 14ನೇ ವರ್ಷದ ಸೂರ್ಯ ಸಿಂಹಾಸನಾರೋಹಣ ಹಾಗೂ ಶ್ರೀ ಬಸವೇಶ್ವರ ದೇವರ ಕಾರ್ತಕೋತ್ಸವ ಜರುಗಲಿದೆ.
ಬೆಳಿಗ್ಗೆ 11 ಗಂಟೆಗೆ ಶ್ರೀ ಕೆಂಚವಿರೇಶ್ವೇ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವು ಶ್ರೀ ಸದ್ಧಾರಮೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉಪನ್ಯಾಸವನ್ನು ಶಾಂತರಾಜ್ ಪಾಟೀಲ್, ಮುಖ್ಯ ಅತಿಥಿಗಳಾಗಿ ಜಿ.ಎಂ. ಸಿದ್ದೇಶ್ವರ, ಡಿ.ಜಿ. ಶಾಂತನ ಗೌಡ್ರು, ಯು.ಬಿ. ಬಣಕಾರ್, ಪ್ರಕಾಶ್ ಕೋಳಿವಾಡ, ಡಾ. ಡಿ.ಬಿ. ಗಂಗಪ್ಪ, ಹೆಚ್.ಎಸ್. ಶಿವಶಂಕರ್, ಎಸ್. ರಾಮಪ್ಪ ಮತ್ತಿತರರು ಇದ್ದರು.