ಹಿಮೊಫಿಲಿಯಾ ವಿರುದ್ಧ ಸುರೇಶ್ ಶ್ರಮ ಅನನ್ಯ

ಹಿಮೊಫಿಲಿಯಾ ವಿರುದ್ಧ ಸುರೇಶ್ ಶ್ರಮ ಅನನ್ಯ

ಹಿಮೊಫಿಲಿಯಾ ರೋಗ ಪತ್ತೆ ಹಚ್ಚುವ ತರಬೇತಿ ಕಾರ್ಯಾಗಾರದಲ್ಲಿ ಡಾ. ಶಶಿಕಲಾ 

ದಾವಣಗೆರೆ, ಫೆ. 19- ಹಿಮೊಫಿಲಿಯಾ ಸೊಸೈಟಿ ಸಣ್ಣ ಬಾಡಿಗೆ ಮನೆಯಿಂದ ಪ್ರಾರಂಭವಾಗಿ  ಇಂದು ಉನ್ನತ ಸ್ಥಾನಕ್ಕೆ ಬೆಳೆಯಲು ಸಂಸ್ಥೆಯ ಅಧ್ಯಕ್ಷರಾದ ಡಾ.ಸುರೇಶ್ ಹನಗವಾಡಿಯವರ ಕಠಿಣ ಪರಿಶ್ರಮ ಮತ್ತು ಅವರ ಸಮರ್ಪಣಾ ಭಾವವೇ ಕಾರಣ ಎಂದು ಎಸ್ಸೆಸ್ ವೈದ್ಯಕೀ ಯಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ ಪ್ರಾಧ್ಯಾಪಕ ರಾದ ಡಾ. ಶಶಿಕಲಾ ಪಿ. ತಿಳಿಸಿದರು.

ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ, ಕುಟುಂಬ ಕಲ್ಯಾಣ ನಿರ್ದೇಶನಾಲಯ ಮತ್ತು ಜ.ಜ.ಮು. ವೈದ್ಯಕೀಯ ಮಹಾ ವಿದ್ಯಾಲಯದ ಸಹಭಾಗಿತ್ವದಲ್ಲಿ ನಗರದಲ್ಲಿ ಈಚೆಗೆ ನಡೆದ ಹಿಮೊಫಿಲಿಯಾ ರೋಗ ಪತ್ತೆ ಹಚ್ಚುವ ವಿಧಾನಗಳ ಬಗ್ಗೆ ಜಿಲ್ಲಾ ಆಸ್ಪತ್ರೆಗಳ ಪ್ರಯೋಗಶಾಲಾ ತಂತ್ರಜ್ಞರುಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಸುರೇಶ್‌ ಹನಗವಾಡಿ ಅವರಿಗೆ  ಹಿಮೊಫಿಲಿಯಾ ಸಮು ದಾಯದ ಬಗ್ಗೆ ಇರುವ ಕಾಳಜಿಯನ್ನು ಮತ್ತು ಹಿಮೊಫಿಲಿಯಾ ಬಾಧಿತರಿಗೆ ಉತ್ಕೃಷ್ಟ ಸೇವೆ ನೀಡುವುದಕ್ಕೆ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಕಂಡಿರುವೆ ಎಂದು ತಿಳಿಸಿದರು. 

ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಯ ಪ್ರಯೋಗ ಶಾಲಾ ತಂತ್ರಜ್ಞರುಗಳಿಗೆ   ರೋಗ ಪತ್ತೆ ಹಚ್ಚುವ ಕುರಿತು ತರಬೇತಿ ನೀಡುವುದು ಮತ್ತು  ರೋಗ ಪತ್ತೆಹಚ್ಚುವ ಪ್ರಯೋಗಾಲಯ ವನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ನೆಲೆಗೊಳಿಸುವುದು.  ಈ ಕಾರ್ಯಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ. ಬಿ.ಟಿ ಅಚ್ಯುತ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ಕುಸುಮ ರೋಗಿಗಳ ಆರೈಕೆ ಮಾಡಿ. ಅದೇ ತಮ್ಮಿಂದ ಬಯಸುವ ದೊಡ್ಡ ಸೇವೆ,  ಜಿಲ್ಲಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞರು ಇಲ್ಲಿ  ತರಬೇತಿ ಪಡೆದು ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಅನುಷ್ಟಾನಕ್ಕೆ ತಂದರೆ ಈ ರೀತಿಯ ತರಬೇತಿಗಳು ಸಾರ್ಥಕವೆನಿ ಸಿಕೊಳ್ಳುತ್ತವೆ ಎಂದು ಹೇಳಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ರಾವ್, ಲೈಫ್‌ಲೈನ್ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಎಂ.ಎಂ. ದೊಡ್ಡಿಕೊಪ್ಪದ್ ಉಪಸ್ಥಿತರಿದ್ದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಮೀರಾ ಹನಗವಾಡಿ  ಕಾರ್ಯಕ್ರಮ ನಿರೂಪಿಸಿ ದರು. ಜ.ಜ.ಮು. ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ
ಡಾ. ಸೌಮ್ಯ ಕೋರಿ  ವಂದಿಸಿದರು. 

error: Content is protected !!