ಭರ್ತಿಯಾದ ಚೆಕ್ ಡ್ಯಾಂ ವೀಕ್ಷಣೆ

ದಾವಣಗೆರೆ, ಸೆ.14- ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆ ಯಡಿಯಲ್ಲಿ ಸಿದ್ದನೂರು ತಾಂಡಾದಲ್ಲಿ ಸ್ವಾಭಾವಿಕ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಚೆಕ್ ಡ್ಯಾಮ್ ಹೂಳನ್ನು ತೆಗೆಯಲಾಗಿತ್ತು. ಸಿದ್ದನೂರಿನಲ್ಲಿ ಬಂದ ಉತ್ತಮ ಮಳೆಯಿಂದ ಚೆಕ್ ಡ್ಯಾಮ್‌ಗಳು ಭರ್ತಿಯಾಗಿವೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭರ್ತಿಯಾದ ಚೆಕ್ ಡ್ಯಾಂಗಳನ್ನು ವೀಕ್ಷಿಸಿದರು. 

ಪ್ರಗತಿಪರ ರೈತರಾದ ತಿಪ್ಪೇಶ್ ನಾಯಕ ಹೇಳುವ ಪ್ರಕಾರ ಈ ಚೆಕ್ ಡ್ಯಾಮ್ ತುಂಬಿರುವು ದರಿಂದ ನಮಗೆ ವರ್ಷಪೂರ್ತಿ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಸುತ್ತಮುತ್ತಲಿನ ಬೋರ್‌ವೆಲ್‌ಗಳಿಗೆ ರಿಚಾರ್ಜ್ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್, ಬೇಸಾಯ ತಜ್ಞ ಮಲ್ಲಿಕಾರ್ಜುನ್ ಸ್ಥಳಗಳಿಗೆ ಭೇಟಿ ನೀಡಿದರು.

error: Content is protected !!