297 ದೃಢ, 274 ಬಿಡುಗಡೆ

297 ದೃಢ, 274 ಬಿಡುಗಡೆ - Janathavani

ದಾವಣಗೆರೆ, ಸೆ. 11- ಜಿಲ್ಲೆಯಲ್ಲಿ ಶುಕ್ರವಾರ 297 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ಬಗ್ಗೆ ವರದಿಯಾಗಿದೆ. ಹರಿಹರ ವಿಜಯ ನಗರ ಬಡಾವಣೆಯ 64 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ.

274 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 12486 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು 2775 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 129, ಹರಿಹರ 37, ಜಗಳೂರು 11, ಚನ್ನಗಿರಿ 43, ಹೊನ್ನಾಳಿ 53 ಹಾಗೂ ಹೊರ ಜಿಲ್ಲೆಯ 24 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.


ಮಲೇಬೆನ್ನೂರು ಹೋಬಳಿಯಲ್ಲಿ 24 ಜನರಿಗೆ ಪಾಸಿಟಿವ್

ಮಲೇಬೆನ್ನೂರು : ಶುಕ್ರವಾರ ಮಲೇಬೆನ್ನೂರು ಹೋಬಳಿಯಲ್ಲಿ 24 ಜನರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಜಿ.ಬೇವಿನಹಳ್ಳಿಯಲ್ಲಿ ಆರು ಜನರಿಗೆ, ಮಲೇಬೆನ್ನೂರಿನಲ್ಲಿ ನಾಲ್ವರಿಗೆ, ಹಾಲಿವಾಣದಲ್ಲಿ ನಾಲ್ವರಿಗೆ, ಕೊಕ್ಕನೂರಿನಲ್ಲಿ ಮೂವರಿಗೆ ಮತ್ತು ಜಿ.ಟಿ.ಕಟ್ಟೆಯಲ್ಲಿ ಇಬ್ಬರಿಗೆ ಹಾಗೂ ಹಳ್ಳಿಹಾಳ್‌, ಬೂದಿಹಾಳ್, ಭಾನುವಳ್ಳಿ, ಮಲ್ಲನಾಯ್ಕನಹಳ್ಳಿ ಗ್ರಾಮಗಳ ತಲಾ ಒಬ್ಬರಿಗೆ ಸೋಂಕು ತಗುಲಿದೆ.

error: Content is protected !!