7 ಸಾವು, 166 ಪಾಸಿಟಿವ್, 166 ಸಕ್ರಿಯ

7 ಸಾವು, 166 ಪಾಸಿಟಿವ್, 166 ಸಕ್ರಿಯ - Janathavani

ದಾವಣಗೆರೆ, ಆ. 23- ಜಿಲ್ಲೆಯಲ್ಲಿ ಸೋಮವಾರ 166 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಏಳು ಜನರು ಸಾವನ್ನಪ್ಪಿದ್ದು, 115 ಜನರು ಆಸ್ಪತ್ರೆಯಿಂದ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 7210 ಜನರಿಗೆ ಸೋಂಕು ದೃಢಪಟ್ಟಿದ್ದು, ಪ್ರಸ್ತುತ 166 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 103, ಹರಿಹರ 17, ಜಗಳೂರು 3, ಚನ್ನಗಿರಿ 18, ಹೊನ್ನಾಳಿ 14 ಹಾಗೂ ಹೊರ ಜಿಲ್ಲೆಯ 11 ಜನರಲ್ಲಿ ಸೋಂಕು ದೃಢಪಟ್ಟಿದೆ.

ದಾವಣಗೆರೆ ಆಂಜನೇಯ ಬಡಾವಣೆಯ 70ರ ವೃದ್ಧ, ಕೊಡಗನೂರು ಗ್ರಾಮದ 45ರ ಪುರುಷ, ಬಸಾಪುರದ 60ರ ಪುರುಷ, ಹೆಚ್ ಕೆ ಆರ್ ವೃತ್ತದ ಬಳಿಯ 13ರ ಬಾಲಕ, ಚಿಕ್ಕಮ್ಮಣ್ಣಿ ಬಡಾವಣೆಯ 25ರ ಪುರುಷ, ಹೆಚ್ಕೆಆರ್ ವೃತ್ತ ಚಿನ್ನುಟವರ್ ಬಳಿಯ 65ರ ಪುರುಷ, 9ರ ಬಾಲಕಿ, 5ರ ಬಾಲಕಿ, 58ರ ಮಹಿಳೆ, 11ರ ಬಾಲಕ, ಚಿಕ್ಕಮ್ಮಣ್ಣಿ ಬಡಾವಣೆಯ 72ರ ವೃದ್ಧ.

ಕೊಟ್ರೇಶ್ವರ ಬಡಾವಣೆಯ 47ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 22ರ ಮಹಿಳೆ, ಜಯನಗರ ಬಿ ಬ್ಲಾಕ್‌ನ 60ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್‌ನ 62ರ ಮಹಿಳೆ, ಮಾಯಕೊಂಡದ 65ರ ಮಹಿಳೆ, ವಿನೋಬನಗರದ 75ರ ಮಹಿಳೆ, ನಿಟುವಳ್ಳಿಯ 19ರ ಮಹಿಳೆ, ಕೆಟಿಜೆ ನಗರದ 38ರ ಪುರುಷ. 

ಬಸವರಾಜ ಪೇಟೆಯ 65ರ ಪುರುಷ, ನಿಟುವಳ್ಳಿ ಸಾಯಿ ಗಾರ್ಮೆಂಟ್ಸ್ ಹಿಂಭಾಗದ 65ರ ಮಹಿಳೆ, ಕೆಇಬಿ ಬಡಾವಣೆಯ 50ರ ಮಹಿಳೆ, ಅಹ್ಮದ್ ನಗರದ 3ನೇ ಕ್ರಾಸ್‌ನ 48ರ ಪುರುಷ, ಪಿಜೆ ಬಡಾವಣೆ 4ನೇ ಮೇನ್‌ನ 65ರ ಪುರುಷ, ಚೌಕಿಪೇಟೆಯ 38ರ ಮಹಿಳೆ, ಇಎಸ್‌ಐ ಕ್ವಾಟ್ರಸ್‌ನ 43ರ ಪುರುಷ, ಸಿದ್ದವೀರಪ್ಪ ಬಡಾವಣೆಯ 90ರ ವೃದ್ಧ, ಮಹಾಲಕ್ಷ್ಮಿ ಬಡಾವಣೆಯ 55ರ ಪುರುಷ, ತರಳಬಾಳು ಬಡಾವಣೆ 16ನೇ ಕ್ರಾಸ್‌ನ 47ರ ಪುರುಷ, ನೂತನ ಕಾಲೇಜು ಬಳಿಯ 58ರ ಮಹಿಳೆ, 18ರ ಮಹಿಳೆ, 16ರ ಬಾಲಕ, ತರಳಬಾಳು ಬಡಾವಣೆಯ 58ರ ಪುರುಷ, ಬಿಟಿ ಗಲ್ಲಿ ಮುಖ್ಯ ರಸ್ತೆಯ 29ರ ಪುರುಷ, ಎಸ್‌ಓಜಿ ಕಾಲೋನಿಯ 38ರ ಮಹಿಳೆ, ಕುಂಬಾರ ಪೇಟೆ ಮುಖ್ಯ ರಸ್ತೆಯ 17ರ ಬಾಲಕಿ, ನೂತ ಕಾಲೇಜು ಬಳಿಯ 28ರ ಮಹಿಳೆ, ರಾಮನಗರದ 42ರ  ಪುರುಷ.

ವಿವೇಕಾನಂದ ಬಡಾವಣೆಯ 38ರ ಪುರುಷ, 70ರ ಪುರುಷ, ವಿನೋಬನಗರದ 15ನೇ ಕ್ರಾಸ್‌ನ 58ರ ಮಹಿಳೆ, ಅತ್ತಿಗೆರೆಯ 72ರ ಪುರುಷ, ತರಳಬಾಳು ಬಡಾವಣೆ ಮುಖ್ಯ ರಸ್ತೆಯ 54ರ ಮಹಿಳೆ, ವಿಜಯಲಕ್ಷ್ಮಿ ರಸ್ತೆಯ 55ರ ಪುರುಷ, ಬೆಳವನೂರಿನ 53ರ ಪುರುಷ, ನಿಜಲಿಂಗಪ್ಪ ಬಡಾವಣೆ 3ನೇ ಕ್ರಾಸ್‌ನ 34ರ ಪುರುಷ, ಆಂಜನೇಯ ಬಡಾವಣೆಯ 51ರ ಪುರುಷ, ವಿನೋಬನಗರದ 66ರ ಪುರುಷ, ದೇವರಾಜ ಅರಸು ಬಡಾವಣೆಯ 55ರ ಪುರುಷ, ಎಂ.ಜಿ. ರಸ್ತೆ ಕೆ.ಆರ್. ಮಾರ್ಕೆಟ್‌ನ 62ರ ಮಹಿಳೆ, ಡಿಸಿಎಂ ಲೇ ಔಟ್‌ ಮುಖ್ಯ ರಸ್ತೆಯ 74ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್‌ನ 81ರ  ಮಹಿಳೆ, 26ರ ಪುರುಷ, ಆಂಜನೇಯ ಬಡಾವಣೆಯ 24ರ ಮಹಿಳೆ.

ಬಸಾಪುರ ರಸ್ತೆಯ ಎಲ್‌ಬಿಎಸ್‌ ನಗರದ 60ರ ಪುರುಷ, ಯರಗಂಟೆ ಕರಿಯಮ್ಮ ದೇವಸ್ಥಾನದ ಬಳಿಯ 19ರ ಯುವತಿ, ಎಸ್.ಎನ್. ಬಡಾವಣೆಯ 33ರ ಪುರುಷ, 19ರ ಯುವತಿ, ನಿಟುವಳ್ಳಿ ಕರಿಯಾಂಬಿಕಾ ದೇವಸ್ಥಾನದ ಬಳಿಯ 38 ಮಹಿಳೆ, ಎಸ್.ಪಿ.ಎಸ್. ನಗರದ ಬೂದಾಳ್ ರಸ್ತೆಯ 46ರ ಪುರುಷ ಸೇರಿ ಒಟ್ಟು 166 ಜನರಲ್ಲಿ ಸೋಂಕು ದೃಢಪಟ್ಟಿದೆ.

error: Content is protected !!