ಇ ಎಸ್ ಐ ನಿವೇಶನದಲ್ಲಿ ಸ್ಥಳೀಯ ಕಚೇರಿ, ನೌಕರರಿಗೆ ವಸತಿ ನಿರ್ಮಿಸಲು ಒತ್ತಾಯ

ದಾವಣಗೆರೆ,ಆ.16- ನಗರದ ಇಎಸ್ಐ ಜಾಗಕ್ಕೆ ನಿನ್ನೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಾಗದಲ್ಲಿ  ಲೋಕಲ್ ಆಫೀಸ್ ಮತ್ತು ನೌಕರರ ವಸತಿ ಸಮುಚ್ಚಯ ನಿರ್ಮಿಸುವಂತೆ ಹಿರಿಯ ಕಾರ್ಮಿಕ ಮುಖಂಡ ಹಾಗೂ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕಾಂ. ಹೆಚ್. ಕೆ. ರಾಮಚಂದ್ರಪ್ಪ ಒತ್ತಾಯಿಸಿದರು.

ನಗರದ ಡಾಂಗೆ ಪಾರ್ಕ್ ಸರ್ಕಲ್ ಬಳಿಯಿ ರುವ ಇ ಎಸ್ ಐ ಜಾಗಕ್ಕೆ ಕಾರ್ಮಿಕರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಕಾರ್ಮಿಕ ಮುಖಂಡರ ಮನವಿಯನ್ನು ಆಲಿಸಿ ಶೀಘ್ರದಲ್ಲೇ ಈ ಸ್ಥಳದಲ್ಲಿ ಇಎಸ್ಐ ಲೋಕಲ್ ಆಫೀಸ್ ನೌಕರರಿಗೆ ವಸತಿ ಸಮುಚ್ಚಯ ಸ್ಥಳೀಯ ಡಿಸ್ಪೆಂಸರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಆನಂದ ರಾಜ್,   ವಾಸು,   ಸುರೇಶ್, ಸರೋಜಾ, ಶಾರದಮ್ಮ, ಎನ್. ಎಚ್. ರಾಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!