11 ಸಾವು: 223 ಪಾಸಿಟಿವ್

ದಾವಣಗೆರೆ, ಆ. 10-  ಜಿಲ್ಲೆಯಲ್ಲಿ ಸೋಮವಾರ 223 ಕೊರೊನಾಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 106 ಮಂದಿ ಸಂಪೂರ್ಣ ಗುಣಮುಖರಾಗಿ  ಬಿಡುಗಡೆ ಗೊಳಿಸಲಾಗಿದ್ದು, 11 ಜನ ಸಾವನ್ನಪ್ಪಿದ್ದಾರೆ.

ದಾವಣಗೆರೆಯಲ್ಲಿ 113, ಹರಿಹರ ದಲ್ಲಿ 60, ಜಗಳೂರಿನಲ್ಲಿ 12, ಚನ್ನಗಿರಿ 20, ಹೊನ್ನಾಳಿ 17,ಹಾಗೂ ಅಂತರ್ ಜಿಲ್ಲೆಯಿಂದ 1, ಕೋವಿಡ್-19 ಪ್ರಕರಣ ಗಳು ವರದಿಯಾಗಿವೆ.  ದಾವಣಗೆರೆಯಿಂದ 50, ಹರಿಹರ 23, ಚನ್ನಗಿರಿ 10, ಹೊನ್ನಾಳಿ 21, ಅಂತರ್ ಜಿಲ್ಲೆಯಿಂದ 1 ಸೇರಿದಂತೆ ಒಟ್ಟು 106 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.  ಜಿಲ್ಲೆಯಲ್ಲಿ ಒಟ್ಟು 3658 ಪ್ರಕರಣಗಳುದಾಖಲಾಗಿದ್ದು, ಈ ಪೈಕಿ 2333 ಮಂದಿ ಸಂಪೂರ್ಣಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 100 ಸಾವುಸಂಭವಿಸಿದ್ದು, ಪ್ರಸ್ತುತ 1225 ಸಕ್ರಿಯಪ್ರಕರಣಗಳಿವೆ.

ಜಿಲ್ಲಾಧಿಕಾರಿಗಳ ಕಚೇರಿ ಬಂದ್ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಳು ಜನರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಂದ್ ಮಾಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಾಳೆ ಎಲ್ಲಾ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ನಾಡಿದ್ದು ಕಚೇರಿ ಎಂದಿನಂತೆ ತೆರೆಯಲಿದೆ ಎಂದಿದ್ದಾರೆ.

error: Content is protected !!