ದಾವಣಗೆರೆ, ಡಿ.14- ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಹೊರತುಪಡಿಸಿ ಉಳಿದ 9 ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಸಮ್ಮತಿಸಿದ ಕಾರಣ ನಗರದಲ್ಲಿ ಕೆಎಸ್ಆರ್ ಟಿಸಿ ನೌಕರರು ಮುಷ್ಕರ ಕೈ ಬಿಟ್ಟು ಯಥಾ ಪ್ರಕಾರ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದು, ಸರ್ಕಾರಿ ಬಸ್ ಗಳ ಸೇವೆ ಆರಂಭವಾಗಿದೆ.
ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ 10 ಬೇಡಿಕೆಗಳನ್ನು ಮುಂದಿಟ್ಟು ಕಳೆದ 4 ದಿನಗಳಿಂದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮುಷ್ಕರ ಕೈಗೊಂಡು ಬಿಗಿಪಟ್ಟು ಹಿಡಿದಿದ್ದರು.
ಬಸ್ ಸ್ಟ್ಯಾಂಡ್ನಲ್ಲಿ ಉಗುಳಿದರೆ ದಂಡ !
ದಾವಣಗೆರೆ, ಡಿ. 14-ಬಸ್ ಒಳಗೆ ಸೀಟ್ ಪಕ್ಕ ಕುಳಿತು ಅಥವಾ ಬಸ್ ನಿಲ್ದಾಣದ ಬೆಂಚ್ ಮೇಲೆ ಕುಳಿತೋ ಪಿಚಕ್ ಪಿಚಕ್ ಎಂದು ಉಗುಳುವವರು, ಅತ್ತ ಇತ್ತ ನೋಡಿ ಕಾಂಪೌಂಡ್ ಬಳಿ ನಿಂತು ಜಲಬಾಧೆ ತೀರಿಸಿ ಕೊಳ್ಳುವವರು, ಧೂಮಪಾನ ಮಾಡುವವರಿಗೆ ದಾವಣಗೆರೆಯ ಕೆಎಸ್ಸಾರ್ಟಿಸಿ ಸಿಬ್ಬಂದಿ ದಂಡ ಬಿಸಿ ಮುಟ್ಟಿಸುತ್ತಿದ್ದಾರೆ.
ನಿಲ್ದಾಣದಲ್ಲಿ ಧೂಮಪಾನ ಮಾಡಿದರೆ 200 ರೂ., ಮೂತ್ರ ವಿಸರ್ಜನೆ ಮಾಡಿದರೆ ಹಾಗೂ ಉಗುಳಿದರೆ 100 ರೂ. ದಂಡದ ವಿಧಿಸಲಾಗುತ್ತಿದೆ. ಪ್ರತಿ ತಿಂಗಳು 20 ಸಾವಿರ ರೂ. ದಂಡ ವಸೂಲಿಯಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಹೇಳಿದರು. ದಂಡ ವಿಧಿಸಿದಾಗ ಮಾತ್ರ ನಿಲ್ದಾಣವನ್ನು ಸ್ವಚ್ಛವಾಗಿಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಗಳೇ ನಿಲ್ದಾಣ ಅಶುದ್ಧಗೊಳಿ ಸುವವರ ಮೇಲೆ ಕಣ್ಣಿಟ್ಟು, ದಂಡ ವಿಧಿಸಿ, ರಶೀದಿ ನೀಡುತ್ತಿದ್ದಾರೆ ಎಂದು ಹೇಳಿದರು.
ಸೋಮವಾರ ಮಧ್ಯಾಹ್ನದವರೆಗೂ ಚಾಲಕರು ಮತ್ತು ನಿರ್ವಾಹಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ನಂತರ ಮಧ್ಯಾಹ್ನದ ವೇಳೆಗೆ ಸರ್ಕಾರವು ಸಾರಿಗೆ ನೌಕರರ ಮುಖಂಡರೊಂದಿಗೆ ಚರ್ಚಿಸಿ, 6ನೇ ವೇತನ ಪರಿಷ್ಕರಣೆ ಸೇರಿದಂತೆ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಷ್ಕರ ವನ್ನು ಸಾರಿಗೆ ನೌಕರರು ಹಿಂಪಡೆದಿದ್ದಾರೆ.
ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭ ವಾಗಬಹುದು ಎಂಬ ನಿರೀಕ್ಷೆಯಲ್ಲಿ ಬಸ್ ನಿಲ್ದಾ ಣಕ್ಕೆ ಬಂದಿದ್ದ ಪ್ರಯಾಣಿ ಕರು ಮಧ್ಯಾಹ್ನ ದವರೆಗೂ ಪರದಾಡಿದರು.
ಕೆಎಸ್ಆರ್ ಟಿಸಿ ನೌಕರರ ಮುಷ್ಕರ ಕೊನೆಗೊಳ್ಳಲಿದ್ದು, ಬಸ್ ಸಂಚಾರ ಆರಂಭವಾಗಲಿದೆ ಎಂಬ ಮಾಧ್ಯಮಗ ಳಲ್ಲಿ ಬಂದ ಸುದ್ದಿ ನೋಡಿ ಪರಸ್ಥಳಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು, ಕೆಎಸ್ ಆರ್ಟಿಸಿ ಅಧಿಕಾರಿಗಳ ಬಳಿ ಬಸ್ ಸಂಚಾರ ಆರಂಭದ ಸಮಯವನ್ನು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಬಸ್ ಸಂಚಾರ ಆರಂಭಗೊ ಳ್ಳುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.