ಪಿ.ಬಿ. ರಸ್ತೆಯಿಂದ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಇದು. ರಸ್ತೆಯ ಆರಂಭ ಹಾಗೂ ಅಂತ್ಯದಲ್ಲಿ ಬೃಹತ್ ಗುಂಡಿಗಳು ಬಿದ್ದಿರುವುದರಿಂದ ನಿತ್ಯವೂ ವಾಹನ ಸವಾರರು ಪಡಿಪಾಟಲು ಹೇಳತೀರದು. ಎಪಿಎಂಸಿಗೆ ದಾಸ್ತಾನು ತರುವ ಹಾಗೂ ತೆಗೆದುಕೊಂಡು ಹೋಗುವ ಟ್ರ್ಯಾಕ್ಟರ್, ಲಾರಿ ಲೋಡುಗಳು ಪಲ್ಟಿಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಡಿಸಿಎಂ ಟೌನ್ ಶಿಪ್ ಬಳಿಗೆ ರೈಲ್ವೇ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ಕೆಎಸ್ಸಾರ್ಟಿಸಿ ಬಸ್ಗಳೂ ಸೇರಿದಂತೆ ವಾಹನ ಸಂಚಾರ ಮತ್ತಷ್ಟು ಹೆಚ್ಚಾಗಿದೆ.
ಈ ಹಿಂದೆ ಇದೇ ಗುಂಡಿಗಳ ಬಗ್ಗೆ ಜನತಾವಾಣಿ ವರದಿ ಮಾಡಿತ್ತು. ಆಗ ಅಧಿಕಾರಿಗಳು ಒಂದಿಷ್ಟು ಮಣ್ಣು ಸುರಿದು ಸುಮ್ಮನಾಗಿದ್ದರು. ಆದರೆ ಈಗ ಗುಂಡಿಗಳ ಗಾತ್ರ ಮತ್ತಷ್ಟು ಹೆಚ್ಚಾಗಿದ್ದರೂ ಸಂಬಂಧ ಪಟ್ಟವರು ಕಣ್ಮುಚ್ಚಿ ಕುಳಿತಿರುವುದು ದುರಂತ. ಕೂಡಲೇ ರಸ್ತೆ ದುರಸ್ತಿ ಪಡಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲಿ.