ಬಿಎಸ್‌ವೈ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋದರೆ ಪೂರ್ಣ ಬಹುಮತ

ಬಿಎಸ್‌ವೈ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋದರೆ ಪೂರ್ಣ ಬಹುಮತ - Janathavaniಚನ್ನಗಿರಿ, ನ. 13 – ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದಿನ ಎರ ಡೂವರೆ ವರ್ಷಗಳವರೆಗೆ ಅಧಿ ಕಾರದಲ್ಲಿ ಮುಂದುವರೆಯಲಿ ದ್ದಾರೆ. ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆಗೆ ಹೋದರೆ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಲ್ಲಿ ಅನುಮಾನವಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಇಲ್ಲಿನ ಸರ್ಕಾರಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ ಹಾಗೂ ವಿವಿದ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ನಡೆದ ವಿಧಾನಸಭಾ ಉಪ ಚುನಾವಣೆ ಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಎರಡೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಪರಿಷತ್‌ಗೆ ನಡೆದ ನಾಲ್ಕು ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದರು.

ನಾಲ್ಕು ಪರಿಷತ್ ಸ್ಥಾನಗಳ ಪೈಕಿ ಒಂದು ಮಾತ್ರ ಚುನಾವಣೆಗೆ ಮುಂಚೆ ಬಿಜೆಪಿ ಬಳಿ ಇತ್ತು. ಈಗ ನಾಲ್ಕರಲ್ಲೂ ಬಿಜೆಪಿ ಗೆದ್ದಿದೆ. ಯಡಿಯೂರಪ್ಪ ನಾಯಕತ್ವದ ಈ ಗೆಲುವುಗಳು ಅವಿಸ್ಮರಣೀಯ ಎಂದು ಸಿದ್ದೇಶ್ವರ ಹೇಳಿದ್ದಾರೆ.  

ಸಮಾರಂಭದಲ್ಲಿ ಮಾತನಾಡಿದ ಶಾಸಕ ಹಾಗೂ ಕೆ.ಎಸ್.ಡಿ.ಎಲ್. ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ, ಯಡಿಯೂರಪ್ಪ ನಾಯಕತ್ವ ಬದಲಾಗುವುದಿಲ್ಲ. ಅವರೇ ಮುಂದುವರೆಯ ಬೇಕು ಎಂಬುದು ರಾಜ್ಯದ ಜನತೆಯ ಇಚ್ಛೆ. ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲು ಅವರ ನಾಯಕತ್ವ ಬೇಕು ಎಂಬ ಭಾವನೆ ಇದೆ ಎಂದರು.

ಬಡವರು ಹಾಗೂ ರೈತರ ಬಗ್ಗೆ ಯಡಿಯೂರಪ್ಪ ಕಾಳಜಿ ಹೊಂದಿದ್ದಾರೆ ಎಂದ ವಿರೂಪಾಕ್ಷಪ್ಪ, ಬಿ.ವೈ. ವಿಜಯೇಂದ್ರ ಅವರು ಉಪ ಚುನಾವಣೆಯ §ಎಕ್ಸ್‌ ಪರ್ಟ್’ ಆಗಿದ್ದಾರೆ. ಅವರಲ್ಲಿ ಒಳ್ಳೆಯ ನಾಯಕತ್ವ ಗುಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!