9 ಸಾವು, 157 ಪಾಸಿಟಿವ್, 118 ಬಿಡುಗಡೆ

9 ಸಾವು, 157 ಪಾಸಿಟಿವ್, 118 ಬಿಡುಗಡೆ - Janathavani

ದಾವಣಗೆರೆ, ಆ.9 – ಜಿಲ್ಲೆಯಲ್ಲಿ ಶನಿವಾರ 157 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ವರದಿಯಾಗಿದೆ. ಒಂಭತ್ತು ಜನರು ಸಾವನ್ನಪ್ಪಿದ್ದು, 118 ಜನರು ಬಿಡುಗಡೆಯಾಗಿದ್ದಾರೆ.  ಇಲ್ಲಿಯ ವರೆಗೆ 3435 ಜನರಲ್ಲಿ ಸೋಂಕು ಕಾಣಿಸಿ ಕೊಂಡಿದ್ದು, 1119 ಸಕ್ರಿಯ ಪ್ರಕರಣ ಗಳಿವೆ. ಒಟ್ಟಾರೆ 89 ಜನರು ಮೃತಪಟ್ಟಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 106, ಹರಿಹರ 9, ಜಗಳೂರು 17, ಚನ್ನಗಿರಿ 15, ಹೊನ್ನಾಳಿ 7 ಹಾಗೂ ಹೊರ ಜಿಲ್ಲೆ ಯ 3 ಜನರಿಗೆ ಪಾಸಿಟಿವ್ ಪತ್ತೆಯಾಗಿದೆ.  

9ಸಾವು: ಜಾಲಿ ನಗರದ  38 ವರ್ಷದ ಪುರುಷ, ಜೈನ್ ಲೇ ಔಟ್‌ನ 65ರ ಮಹಿಳೆ, ಆಜಾದ್ ನಗರದ 75ರ ವೃದ್ಧ, ಎಸ್.ಪಿ.ಎಸ್. ನಗರದ 55ರ ಮಹಿಳೆ,  ರೇಣುಕಾ ಬಡಾವಣೆಯ 63ರ ಪುರುಷ, ವಿನಾಯಕ ನಗರದ 49ರ  ಪುರುಷ, ಕುಕ್ಕವಾಡದ 54ರ ಪುರುಷ,  ಹರಿಹರ ಜೆ.ಸಿ.ಬಡಾವಣೆಯ 75ರ ವೃದ್ಧೆ, ಕಾಳಿಕಾದೇವಿ ರಸ್ತೆಯ 48ರ ಪುರುಷ ಇವರು ಸಾವನ್ನಪ್ಪಿದ್ದಾರೆ.

ದಾವಣಗೆರೆಗೆ ಸಮೀಪದ ಆನೆಕೊಂಡದ ಬೇತೂರು ರಸ್ತೆಯ 56ರ ಪುರುಷ, ಮಾಯಕೊಂಡದ 44ರ ಪುರುಷ, 14ರ ಬಾಲಕಿ, ಎಂ.ಸಿ.ಸಿ. ಎ ಬ್ಲಾಕ್‌ನ 59ರ ಪುರುಷ, ಅಪೂರ್ವ ಹೋಟೆಲ್‌ನ 76ರ ವೃದ್ಧ, ಕೆಇಬಿ ಬಡಾ ವಣೆಯ 35ರ ಪುರುಷ, ವಿನೋಬ ನಗರದ 25ರ ಪುರುಷ, ಮಲ್ಲೇನಹಳ್ಳಿಯ 40ರ ಪುರುಷ, ಎಸ್.ಓ. ಜಿ ಕಾಲೋನಿಯ 22ರ ಪುರುಷ, ಡಿಸಿಎಂ ಟೌನ್‌ಶಿಪ್‌ನ 69ರ ಮಹಿಳೆ, 67ರ ಪುರುಷ, ನೀರ್ಥಡಿಯ 18ರ ಯುವತಿ, ನಿಟುವಳ್ಳಿಯ 65ರ ಮಹಿಳೆ, 75ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್‌ 55ರ ಪುರುಷ, ಬುದ್ಧ ಬಸವ ನಗರದ 26ರ ಯುವಕ.

ನಿಟುವಳ್ಳಿಯ 45ರ ಪುರುಷ, ಕಾಯಿಪೇಟೆಯ 49ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್‌ನ 60ರ ಮ ಹಿಳೆ, 67ರ ಮಹಿಳೆ, ಆವರೆಗರೆೆಯ 58ರ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 54ರ ಮಹಿಳೆ, 25ರ ಮಹಿಳೆ, ಎಸ್.ಒ.ಜಿ. ಕಾಲೋನಿಯ 41ರ ಮಹಿಳೆ, ಶ್ರೀರಾಮನಗರದ 41ರ ಪುರುಷ, ಬಸವನಗರ 1ನೇ ಕ್ರಾಸ್‌ನ 51ರ ಮಹಿಳೆ, ಬೇಡ ಜಂಗಮರ ಬೀದಿಯ 17ರ ಬಾಲಕ, 60ರ ಪುರುಷ. ಬಸವೇಶ್ವರ ಬಡಾವಣೆ 48ರ ಪುರುಷ, 32 ಮಹಿಳೆ, 25ರ ಮಹಿಳೆ, 14ರ ಬಾಲಕ, ವಾಟರ್ ಟ್ಯಾಂಕ್ ಹತ್ತಿರದ 13ರ ಬಾಲಕ, ಹೆಚ್.ಕೆ.ಆರ್. ನಗರ 1ನೇ ಕ್ರಾಸ್ ನ 40ರ ಪುರುಷ, 18ರ ಯುವಕ, 45ರ ಪುರುಷ, 30ರ ಮಹಿಳೆ, 14ರ ಬಾಲಕ,  ಅಶೋಕ ನಗರದ ಸೇವದಳ ಕಾಲೋನಿ 42ರ ಮಹಿಳೆ, ಎಸ್.ಎಸ್ ಲೇಔಟ್‍ನ 64 ರ ಪುರುಷ, ಬಂಬೂ ಬಜಾರ್ ನ 45ರ ಪುರುಷ, ಪುಟಗನಾಳ್ ಗ್ರಾಮದ 58ರ ಮಹಿಳೆ, ದೇವರಾಜ್ ಅರಸ್ ಬಡಾವಣೆಯ 65ರ ಮಹಿಳೆ, ಬಸವ ನಗರದ 34ರ ಮಹಿಳೆ,  ಕುಕ್ಕವಾಡ ಗ್ರಾಮದ 34ರ ಮಹಿಳೆ, ಚೌಡೇಶ್ವರಿ ನಗರದ 25ರ ಮಹಿಳೆ.

ಹೆಚ್.ಕೆ.ಆರ್. ವೃತ್ತದ ಬಳಿಯ 50ರ ಮಹಿಳೆ, ಆಂಜನೇಯ ಬಡಾವಣೆ ಯ20ರ ಮಹಿಳೆ, ಶ್ರೀರಾಮನಗರದ 20ರ ಮಹಿಳೆ, ಎಂ.ಸಿ.ಸಿ. ಎ ಬ್ಲಾಕ್‌ 59ರ ಪುರುಷ, 58ರ ಮಹಿಳೆ, 8ರ ಬಾಲಕಿ, 32ರ ಪುರುಷ, 29ರ ಪುರುಷ, ಯಲ್ಲಮ್ಮ ನಗರದ 55ರ ಪುರುಷ, ತೋಳಹುಣಸೆಯ 45ರ ಪುರುಷ, ಕೆಟೆಜೆ ನಗರದ 35ರ ಪುರುಷ, ಆವರೆಗೆರೆಯ 34ರ ಪುರುಷ, ವಿನೋಬನಗರದ 47ರ ಪುರುಷ, ತೋಳಹುಣಸೆಯ 23ರ ಮಹಿಳೆ, 22ರ ಮಹಿಳೆ, 22ರ ಮ ಹಿಳೆ, 48ರ ಮಹಿಳೆ, 17ರ ಯುವತಿ, ಸಿದ್ದವೀರಪ್ಪ ಬಡಾವಣೆಯ 64ರ ಪುರುಷ, ವಿನೋಬನಗದ 10ರ ಬಾಲಕ, 35ರ ಮಹಿಳೆ.

ಭಗತ್ ಸಿಂಗ್ ನಗರದ 36ರ ಮಹಿಳೆ, ಆನೆಕೊಂಡದ 53ರ ಪುರುಷ, 45ರ ಮ ಹಿಳೆ, ಮಿಲ್ಲತ್ ಬಡಾವಣೆಯ 32ರ ಮಹಿಳೆ, ನಿಟುವಳ್ಳಿಯ 31ರ ಪುರುಷ, 48ರ ಪುರುಷ, 40ರ ಮಹಿಳೆ, 10ರ ಬಾಲಕ, ಸರಸ್ವತಿ ನಗರದ 30ರ ಪುರುಷ, ಶಂಕರ್ ವಿಹಾರ ಬಡಾವಣೆಯ 33ರ ಪುರುಷ, ಕುರುಬರ ಕೇರೆಯ 65ರ ಪುರುಷ, ದೊಡ್ಡಬಾತಿಯ 61ರ ಮಹಿಳೆ, 58ರ ಮಹಿಳೆ, 35ರ ಪುರುಷ, 7ರ ಬಾಲಕ, 70ರ ವೃದ್ಧ, 35ರ ಪುರುಷ,

ಎಂ.ಸಿ.ಸಿ. ಬಿ ಬ್ಲಾಕ್‌ 46ರ ಪುರುಷ, 2ನೇ ಕ್ರಾಸ್‌ನ 75ರ ಮಹಿಳೆ, 58ರ ಪುರುಷ, ವಿನೋಬನಗರದ 58ರ ಪುರುಷ, ಭಗತ್ ಸಿಂಗ್ ನಗರದ 66ರ ಪುರುಷ, ಆಂನಜೇಯ ಬಡಾವಣೆಯ 29ರ ಪುರುಷ, ರಾಮನಗರದ 58ರ ಮಹಿಳೆ, ಕೆಟಿಜೆ ನಗರದ 68ರ ಪುರುಷ, ಗಾಂಧಿ ನಗರ 6ನೇ ಕ್ರಾಸ್ 33ರ ಪುರುಷ ಸೇರಿ ಒಟ್ಟು 157 ಜನರಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆ ತಾಲ್ಲೂಕಿನ 71, ಹರಿಹರ 9, ಜಗಳೂರಿನ 8, ಚನ್ನಗಿರಿಯ 34, ಹೊನ್ನಾಳಿಯ 5 ಹಾಗೂ ಹೊರ ಜಿಲ್ಲೆಯ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನಲ್ಲಿ 47 ಪಾಸಿಟಿವ್ : ಮಹಿಳೆ ಸಾವು

ಕೋವಿಡ್ 19 ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಹರಪನ ಹಳ್ಳಿ ತಾಲ್ಲೂಕಿನಲ್ಲಿ 47 ಜನರಿಗೆ ಸೊಂಕು ದೃಢ ಪಟ್ಟು, ಒರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಜರುಗಿದೆ.

ಪಟ್ಟಣದಲ್ಲಿ 10 ಹಾಗೂ ಗ್ರಾಮೀಣ ಭಾಗದಲ್ಲಿ 37 ಜನರಿಗೆ ಸೊಂಕು ಆವರಿಸಿದೆ. ಕಣವಿಹಳ್ಳಿಯಲ್ಲಿ 50 ವರ್ಷದ ಮಹಿಳೆ ಕೋವಿಡ್ ಗೆ ಬಲಿಯಾಗಿದ್ದಾಳೆ. 

ಹರಪನಹಳ್ಳಿ ಪಟ್ಟಣದಲ್ಲಿ ತೆಲುಗರ ಓಣಿಯಲ್ಲಿ 60 ವರ್ಷದ ಪುರುಷ, ಪಠಾಣಗೇರಿಯ ನಿವಾಸಿ ಅಡವಿಹಳ್ಳಿಯಲ್ಲಿ ಕೆಲಸ ಮಾಡುವ  59 ವರ್ಷದ ಶಿಕ್ಷಕ, ಉಪ್ಪಾರಗೇರಿಯಲ್ಲಿ 55 ವರ್ಷದ ಮಹಿಳೆ, 16 ವರ್ಷದ ಬಾಲಕಿ, ಮೇಗಳಪೇಟೆಯಲ್ಲಿ  58 ವರ್ಷದ ಮಹಿಳೆ, 32 ವರ್ಷದ ಮಹಿಳೆ ಗೆ ಸೊಂಕು ಆವರಿಸಿದೆ.

ಭಾರತೀ ನಗರದಲ್ಲಿ 60 ವರ್ಷದ ವೃದ್ದ, 59 ವರ್ಷದ ನಿವೃತ್ತ ಬ್ಯಾಂಕ್ ನೌಕರ,  ಹಲುವಾಗಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 58 ವರ್ಷದ ಮುಖ್ಯ ಶಿಕ್ಷಕ, ಗುಂಡಿನಕೇರಿಯಲ್ಲಿ 56 ವರ್ಷದ ಮಹಿಳೆ ಗೆ ಸೊಂಕು ಕಾಣಿಸಿಕೊಂಡಿದೆ.

ಗ್ರಾಮೀಣ ಭಾಗದಲ್ಲಿ ಅರಸಿಕೇರಿ ಪೊಲೀಸ್ ಠಾಣೆಯ 29 ವರ್ಷದ ಪೇದೆ, ಅವರ 26 ವರ್ಷದ ಅಳಿಯ ಹಾಗೂ  65 ವರ್ಷದ ಮಹಿಳೆ, 3 ವರ್ಷದ ಬಾಲಕಿ, 26 ವರ್ಷದ ಪುರುಷನಿಗೆ ಸೊಂಕು ತಗುಲಿದೆ.

ಪುಣಭಗಟ್ಟದ 65 ವರ್ಷದ ಮಹಿಳೆ, ಕಂಚಿಕೇರಿಯಲ್ಲಿ 47 ವರ್ಷದ ಮಹಿಳೆ, ಗೊಲ್ಲರಹಟ್ಟಿಯಲ್ಲಿ 21 ವರ್ಷದ ಮಹಿಳೆ, ಪವನಪುರ ದಲ್ಲಿ 43 ವರ್ಷದ ಮಹಿಳೆ, ಹಿರೇಮೇಗಳಗೇರಿಯಲ್ಲಿ 27 ವರ್ಷದ ಪುರುಷ, ನಿಲುವಂಜಿಯಲ್ಲಿ 45 ವರ್ಷದ ಮಹಿಳೆ, ಕಾನಹಳ್ಳಿಯಲ್ಲಿ 22 ವರ್ಷದ ಪುರುಷ, ಕುಂಚೂರು ನಲ್ಲಿ 55 ವರ್ಷದ ಪುರುಷನಿಗೆ, ಮಾದಿಹಳ್ಳಿಯಲ್ಲಿ ಆರು ಜನರಿಗೆ ಸೊಂಕು ಆವರಿಸಿದೆ.

ನೀಲಗುಂದದಲ್ಲಿ 35 ವರ್ಷದ ಸ್ಟಾಫ್ ನರ್ಸ್ ಹಾಗೂ ಕೆಎಸ್ ಆರ್ ಟಿಸಿ 49 ವರ್ಷದ  ಸಿಬ್ಬಂದಿ, ಎನ್ . ಶೀರನಹಳ್ಳಿ ಯಲ್ಲಿ 65 ವರ್ಷದ ರೈತನಿಗೆ, ಮತ್ತಿ ಹಳ್ಳಿಯಲ್ಲಿ 37 ವರ್ಷದ ಪುರುಷನಿಗೆ, ತೆಲಿಗಿ, ತಿಮ್ಮಲಾ ಪುರದಲ್ಲಿ 17 ವರ್ಷದ ಮಹಿಳೆ ಹಾಗೂ 46 ವರ್ಷದ ಪುರುಷ ನಿಗೆ ಕೋವಿಡ್ ಸೊಂಕು ಪತ್ತೆಯಾಗಿದೆ.

ನಂದಿಬೇವೂರು ಗ್ರಾಮದಲ್ಲಿ ಗ್ರಾ.ಪಂ.ನಲ್ಲಿನ ನೀರಗಂಟಿಗೆ, ನಿಚ್ಚಾಪುರ ದಲ್ಲಿ 57 ವರ್ಷದ ಪುರುಷ 48 ವರ್ಷದ ಮಹಿಳೆ, 50 ವರ್ಷದ ಪುರುಷನಿಗೆ ಸೊಂಕು ದೃಢ ಪಟ್ಟಿದೆ.

ಪಟ್ಟಣದ 30 ವರ್ಷದ ಪುರುಷ, ಶೀರನಹಳ್ಳಿಯಲ್ಲಿ 25 ವರ್ಷದ ಮಹಿಳೆ, ಐಗಳಬಸಾಪುರ ದಲ್ಲಿ 24 ವರ್ಷದ ಮಹಿಳೆ ಈ ಮೂವರು ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಮೇಲೆ ತಿಳಿಸಿದ ಎಲ್ಲಾ ಸೇರಿ 140 ಜನ ಪ್ರಾಥಮಿಕ ಹಾಗೂ 130 ದ್ವಿತೀಯ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಗುರುತಿಸಿದೆ.

ಹರಿಹರ: 9 ದೃಢ, 2 ಸಾವು : ನಗರದಲ್ಲಿ ಇಂದು 9 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ಇಲ್ಲಿಯವರೆಗೆ 509 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 329 ಜನರು ಗುಣಮುಖರಾಗಿದ್ದಾರೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದಲ್ಲಿ 364 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 145 ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಹೋಂ ಐಸೋಲೇಷನ್ ನಲ್ಲಿ 96, ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ 127, ಕೊವಿಡ್ ಕೇರ್ ಸೆಂಟರ್ ನಲ್ಲಿ 162, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 80 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಂದು 43 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೆ 8049 ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಕಂಟೋನ್ಮೆಂಟ್ ಝೋನ್ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 198 ಇದ್ದು ಅದರಲ್ಲಿ 106 ಅವಧಿ ಮುಕ್ತಾಯವಾಗಿದೆ. ಉಳಿದ 98 ಕಂಟೋನ್ಮೆಂಟ್ ಝೋನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಯಾವುದೇ ಅಗತ್ಯ ವಸ್ತುಗಳ ಕೊರತೆ ಬರದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. 

ನಗರದಲ್ಲಿ ಇಂದು 2 ವ್ಯಕ್ತಿಗಳು ಮರಣ ಹೊಂದಿದ್ದು. ಇಲ್ಲಿಯವರೆಗೆ 19 ವ್ಯಕ್ತಿಗಳು ಮರಣವನ್ನು ಹೊಂದಿದ್ದಾರೆ ಎಂದು ಹೇಳಿದರು.

ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಸಿಪಿಐ ಎಸ್. ಶಿವಪ್ರಸಾದ್, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಪಿಎಸ್ಐ ಎಸ್. ಶೈಲಾಶ್ರೀ, ನಗರಸಭೆ ಎಇಇ ಬಿರಾದಾರ್ ಇತರರು ಕಂಟೋನ್ಮೆಂಟ್ ಝೋನ್ ಗಳಿಗೆ ಭೇಟಿಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. 

error: Content is protected !!