ಹುತಾತ್ಮರು, ನೊಂದವರ ಕುಟುಂಬಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ

ದಾವಣಗೆರೆ, ಆ. 6- ನಗರಕ್ಕೆ ರಾಮಜ್ಯೋತಿ  ಆಗಮಿಸಿದ್ದ ವೇಳೆ ಹುತಾತ್ಮರಾದವರ ಕುಟುಂಬ ವರ್ಗಕ್ಕೆ ಇಲ್ಲಿಯವರೆಗೆ ಸಾಂತ್ವನ ಹೇಳದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅವರಿಗೆ ಈಗ ಇದ್ದಕ್ಕಿಂದ್ದಂತೆ ಅವರ ನೆನಪಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಆರ್.ಪ್ರತಾಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಮಡಿದವರ ಕುಟುಂಬ ಹಾಗೂ ಗಾಯಾಳುಗಳಾದವರ ಬಗ್ಗೆ ಇಷ್ಟು ದಿನವಿಲ್ಲದ ಕಾಳಜಿ ಈಗ ಬಂದಿರುವುದು ನೋಡಿದರೆ ಇದರಲ್ಲೂ ರಾಜಕೀಯದ ಘಾಟು ಕಾಣುತ್ತಿದೆ ಎಂದು ಕುಟುಕಿದರು.

ಬರುವ ಅಕ್ಟೋಬರ್ 6 ರಂದು ಹುತಾತ್ಮರ ಹೆಸರು ಕೆತ್ತಿಸಿದ ಬೆಳ್ಳಿ ಇಟ್ಟಿಗೆ ಕಳುಹಿಸುವುದು. ಗಾಯಗೊಂಡವರಿಗೆ ಬೆಳ್ಳಿ ನಾಣ್ಯ ನೀಡುವುದು ಬಿಟ್ಟು ನೊಂದ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಿ ಎಂದು ಹೇಳಿದರು. ನಾನೂ ಸಹ ಅಂದಿನ ಗೋಲಿಬಾರ್‌ನಲ್ಲಿ ಗಾಯಗೊಂಡಿದ್ದೆ. ಎಂಟು ತಿಂಗಳು ಜೈಲು ವಾಸ ಅನುಭವಿಸಿದ್ದೇನೆ. ನೊಂದವರ ಕಷ್ಟ ಏನೆಂದು ನನಗೆ ತಿಳಿದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ಗುಬ್ಬಿ, ಕುಮಾರ್, ಸಂತೋಷ್ ಇದ್ದರು.

error: Content is protected !!