ಹರಪನಹಳ್ಳಿ: ಕೊರೊನಾದಿಂದ ಗುಣಮುಖರಾಗಿದ್ದ ಪೇದೆ ಸಾವು

ಹರಪನಹಳ್ಳಿ: ಕೊರೊನಾದಿಂದ ಗುಣಮುಖರಾಗಿದ್ದ ಪೇದೆ ಸಾವು - Janathavaniಹರಪನಹಳ್ಳಿ, ಜು.24- ತಾಲ್ಲೂನ ಅರಸಿಕೇರಿ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆ ಎಂ.ರವಿ ಉಪ್ಪಾರ (45) ಅನಾರೋಗ್ಯದಿಂದ ಶುಕ್ರವಾರ ಬೆಳಗಿನ ಜಾವ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತ ಮುಖ್ಯ ಪೇದೆ ರವಿ ಕಳೆದ ಒಂದು ತಿಂಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದು, ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಯಾಗಿ ಬಂದು ಹೋಂ ಕ್ವಾರಂಟೈನ್‌ ನಲ್ಲಿ ಇದ್ದರು.  ಹೋಂ ಕ್ವಾರಂಟೈನ್ ಅವಧಿ ಮುಗಿಸಿಕೊಂಡು  ಕರ್ತವ್ಯಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಜು.23 ರಂದು ಉಸಿರಾಟದ ತೊಂದರೆಯಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ  ಶುಕ್ರವಾರ ಮೃತ ಪಟ್ಟಿದ್ದಾರೆ.

 ಮರಣದ  ನಂತರ  ಪುನಃ ನಡೆದ  ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರಿಂದ ಆಸ್ಪತ್ರೆಯವರು ಮೃತ ದೇಹವನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಮೃತ ಮುಖ್ಯ ಪೇದೆ ರವಿಯವರ ಅಂತ್ಯಸಂಸ್ಕಾರವನ್ನು ಸ್ವಂತ ಗ್ರಾಮವಾದ  ತಾಲ್ಲೂಕಿನ ಗೋವೇರಹಳ್ಳಿಯಲ್ಲಿ ರಾತ್ರಿ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು ಎಂದು ಡಿವೈಎಸ್ಪಿ ಮಲ್ಲೇಶ ದೊಡ್ಮನಿ ತಿಳಿಸಿದ್ದಾರೆ.

error: Content is protected !!