ಬೀದಿ ಬದಿ ವ್ಯಾಪಾರಸ್ಥರ ಮೇಲಿನ ದೌರ್ಜನ್ಯಕ್ಕೆ ದಿನೇಶ್ ಕೆ.ಶೆಟ್ಟಿ ಖಂಡನೆ

ದಾವಣಗೆರೆ, ಜು.23- ಪ್ರತಿದಿನ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ನಡೆಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

ಇಂದು ಸಂಜೆ ಏಕಾಏಕಿ ಪೊಲೀಸರು ನಗರದ ಹಲವು ಪ್ರದೇಶಗಳಲ್ಲಿ ಬೀದಿ ಬದಿ ಹೋಟೆಲ್ ಮತ್ತು ತಿಂಡಿ ಗಾಡಿ ಗಳನ್ನು ಬೀದಿಗೆಸೆದು ಮುಚ್ಚಿಸಿದ್ದಾರೆ. ಇವರಿಗೆ ಯಾರು ಆದೇಶ ನೀಡಿದರೋ ತಿಳಿಯುತ್ತಿಲ್ಲ. ಸರ್ಕಾರ ಮತ್ತು ಜಿಲ್ಲಾಡಳಿತವೇ ರಾತ್ರಿ 8 ಗಂಟೆಯವರೆಗೆ ವ್ಯಾಪಾರ ನಡೆಸಲು ಅನುಮತಿ ನೀಡಿ ರುವಾಗ ಏಕಾಏಕಿ ಬಂದ್ ಮಾಡಿಸಲಾಗಿದೆ. ಪ್ರತಿನಿತ್ಯ ದುಡಿದು ಜೀವಿಸುವ ಅನೇಕರಿಗೆ ತೊಂದರೆ ಆಗಿದ್ದು, ಜಿಲ್ಲಾಡಳಿತ ಈ ಕೂಡಲೇ ಮಧ್ಯೆ ಪ್ರವೇಶಿಸಿ, ಪ್ರತಿನಿತ್ಯಮ ದುಡಿಮೆ ಮಾಡಲು ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಏಕಾಏಕಿ ಬಂದ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಕೆ.ಶೆಟ್ಟಿ ಆಗ್ರಹಿಸಿದ್ದಾರೆ.

error: Content is protected !!