ಸಾರಥಿ ರೈತರಿಗೆ ಭತ್ತದ ಹಣ ಪಾವತಿ

ಹರಿಹರ, ಡಿ. 19 – ತಾಲ್ಲೂಕಿನ ಸಾರಥಿ ಗ್ರಾಮದ 22 ರೈತರ ಭತ್ತವನ್ನು ಖರೀದಿ ಮಾಡಿದ್ದ ವರ್ತಕ ಪ್ರಶಾಂತ ಸ್ವಾಮಿ, ರೈತರಿಗೆ ನೀಡಬೇಕಾಗಿದ್ದ ಹಣವನ್ನು ಪಾವತಿಸಿದ್ದಾರೆ.

ಈ ವೇಳೆ ಮಾತನಾಡಿದ ಭತ್ತದ ವ್ಯಾಪಾರಿ ಪ್ರಶಾಂತ್ ಸ್ವಾಮಿ, ದೋಸ್ತಾನ ಸಾಮಿಲ್‌ನಲ್ಲಿ ತಾಂತ್ರಿಕ ತೊಡಕಾದ ಕಾರಣ ಭತ್ತ ಪಡೆಯಲು ಸ್ವಲ್ಪ ಸಮಯ ಬೇಕಾಯಿತು. ಹಣ ಪಾವತಿಗಾಗಿ ನ್ಯಾಯಾಲಯದಿಂದ ಸಮಯ ಪಡೆದಿದ್ದೆ ಎಂದಿದ್ದಾರೆ.

ಈಗ ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು, ರೈತರಿಗೆ ಹಣ ಮರಳಿಸಿದ್ದೇನೆ ಎಂದವರು ಹೇಳಿ ದ್ದಾರೆ. ಈ ಸಂದರ್ಭದಲ್ಲಿ ಸಾರಥಿ ಗ್ರಾಮದ ಜಗದೀಶ್, ಕಿರಣ್, ಯಲ್ಲಪ್ಪ, ನಾಗಪ್ಪ, ಶಿವಕುಮಾರ್, ಹನುಮಂತಪ್ಪ, ಮಂಜಪ್ಪ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!