ದಾವಣಗೆರೆ ದಕ್ಷಿಣ ವಿಧಾನಸಭೆ ರಾಜ್ಯಕ್ಕೇ ಮಾದರಿ : ಎಸ್ಸೆಸ್

ದಾವಣಗೆರೆ, ಡಿ.19- ದಾವಣಗೆರೆ ದಕ್ಷಿಣ ವಿಧಾನಸಭೆ ರಾಜ್ಯಕ್ಕೇ ಮಾದರಿ ಆಗುವ ನಿಟ್ಟಿನಲ್ಲಿ ಅಭಿವೃದ್ಧಿ ಆಗುತ್ತಿದ್ದು, ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡದೆ, ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

ನಗರದ ವಾರ್ಡ್ ನಂಬರ್ 3 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ.ಗಳನ್ನು ತಂದು ನಗರ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.

ಪಾಲಿಕೆ ಸದಸ್ಯ ಎ.ಬಿ.ರಹೀಂಸಾಬ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರುಗಳಾದ ಜಾಕೀರ್, ಶಫೀಕ್ ಪಂಡಿತ್, ಎನ್.ಕೆ.ಇಸ್ಮಾಯಿಲ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಸಹಾಯಕ ಅಭಿಯಂತರ ಹೆಚ್.ವೆಂಕಟೇಶ್, ಗುತ್ತಿಗೆದಾರರಾದ ರವಿಕುಮಾರ್, ರಾಮಬಾಬು, ಮುಖಂಡರುಗಳಾದ ಹಬೀಬ್ ಸಾಬ್, ಮಹ್ಮದ್ ಹರ್ಷದ್, ಅಕ್ಬರ್ ಅಲಿ, ಅಬ್ದುಲ್ ಜಬ್ಬಾರ್, ನಾಸೀರ್ ಸಾಬ್, ಅಲಿ, ಮಹಬೂಬ್, ಇಮ್ತಿಯಾಜ್ ಸೇರಿದಂತೆ ಹಲವರಿದ್ದರು.

error: Content is protected !!